ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಇತ್ತೀಚಿಗೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದೆ. ಕಟಾವಿನ ಹಂತಕ್ಕೆ ಬಂದಿದ್ದ ಈ ಬೆಳೆ ನಾಶದಿಂದ ರೈತಾಪಿ ವರ್ಗ ಕಂಗಾಲಾಗಿದೆ. ಎರಡೇ ದಿನಗಳಲ್ಲಿ ಈ ಬೆಳೆ ನಷ್ಟದ ಸರ್ವೇ ಕಾರ್ಯವನ್ನ ಪೂರ್ಣಗೊಳಿಸಿ ರೈತಾಪಿ ವರ್ಗದವರ ಮೆಚ್ಚುಗೆಗೆ ಜಿಲ್ಲಾಡಳಿತ ಪಾತ್ರವಾಗಿದೆ.
ಜಿಲ್ಲಾದ್ಯಂತ ಅಂದಾಜು 2,361 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಭತ್ತದ ಬೆಳೆ, ಅಂದಾಜು 36.98 ಹೆಕ್ಟೇರ್ ಪ್ರದೇಶಲ್ಲಿ ನಾನಾ ತೋಟಗಾರಿಕೆ ಬೆಳೆ ನಷ್ಟ ಉಂಟಾಗಿದೆ. ಅದರಲ್ಲಿ ಸಿರುಗುಪ್ಪ ಭಾಗದಲ್ಲೇ 2,014 ಹೆಕ್ಟೇರ್ ಪ್ರದೇಶ ಭತ್ತದ ಬೆಳೆ ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಮತ್ತು ಕೃಷಿ ಇಲಾಖೆಯು ಅಂದಾಜಿಸಿದೆ.
ಕೇಂದ್ರ ಸರ್ಕಾರಕ್ಕೆ ವರದಿ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಕುಲ್ ಮಾತನಾಡಿ, ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ ಹಾಗೂ ಸಿರುಗುಪ್ಪ ತಾಲೂಕಿಲ್ಲಿ ಅಕಾಲಿಕ ಮಳೆ ಸುರಿದಿತ್ತು. ಅಂದಾಜು 304 ಹೆಕ್ಟೇರ್ ಮಾತ್ರ ಬೆಳೆ ನಷ್ಟ ಸಂಭವಿಸಿತ್ತು. ಅದರ ಪರಿಹಾರದ ಹಣವು ಈ ವಾರದಲ್ಲಿ ಆಯಾ ಬೆಳೆ ನಷ್ಟಕ್ಕೆ ಗುರಿಯಾದವರ ಉಳಿತಾಯ ಖಾತೆಗೆ ಜಮೆಯಾಗಲಿದೆ. ಆದರೆ, ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಸುರಿದ ಆಲಿಕಲ್ಲು ಮಳೆಯು ಸಿರುಗುಪ್ಪ ರೈತರನ್ನ ಅತೀವ ಸಂಕಷ್ಟಕ್ಕೀಡು ಮಾಡಿದೆ. ಹೀಗಾಗಿ, ಜಂಟಿ ಸರ್ವೇ ಕಾರ್ಯವನ್ನ ಕೇವಲ ಎರಡೇ ದಿನಗಳಲ್ಲಿ ಮಾಡಲಾಗಿದ್ದು, ಇದನ್ನೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಆರೆಂಜ್ ಝೋನ್ನಲ್ಲಿ ಗಣಿ ಜಿಲ್ಲೆ