ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿ ಮಾಸ್ಕ್ ಹಾಕದೇ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಸಾರ್ವಜನಿರಿಗೆ ಪೊಲೀಸರು ಲಾಠಿ ಏಟು ನೀಡದೇ ಕಪ್ಪೆ ಜಿಗಿತ, ಬಸ್ಕಿ ಹೊಡೆಸಿ ಜಾಗೃತಿ ಮೂಡಿಸಿ ಕಳಿಸಿದ್ದಾರೆ.
ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಮಾಡಿಸಿದ್ದೇನು ಗೊತ್ತಾ? - bellary corona effect
ಬಳ್ಳಾರಿ ನಗರದಲ್ಲಿ ಮಾಸ್ಕ್ ಹಾಕದೇ ತಿರುಗಾಡುತ್ತಿದ್ದವರಿಗೆ ಪೊಲೀಸರು ಅವರ ಅಂಗಿ ಬಿಚ್ಚಿಸಿ ಬನಿಯನ್ನನ್ನೇ ಮಾಸ್ಕ್ ರೀತಿ ಕಟ್ಟಿಸಿ ಕಳಿಸಿದ್ದಾರೆ.

ಅನಗತ್ಯವಾಗಿ ಓಡಾಡುತ್ತಿದ್ದರಿಗೆ ಕಪ್ಪೆಯಂತೆ ಜಿಗಿಸಿದ ಪೊಲೀಸರು
ಅನಗತ್ಯವಾಗಿ ಓಡಾಡುತ್ತಿದ್ದರಿಗೆ ಕಪ್ಪೆಯಂತೆ ಜಿಗಿಸಿದ ಪೊಲೀಸರು
ಅಲ್ಲದೇ ಮಾಸ್ಕ್ ಹಾಕದೇ ತಿರುಗಾಡುತ್ತಿದ್ದವರಿಗೆ ಅವರದ್ದೇ ಅಂಗಿ ಬಿಚ್ಚಿಸಿ ಬನಿಯನ್ನನ್ನೇ ಮಾಸ್ಕ್ ರೀತಿಯಲ್ಲಿ ಕಟ್ಟಿಸಿದರೆ, ಇನ್ನು ಕೆಲವರು ಪ್ಲಾಸ್ಟಿಕ್ ಕವರ್ಗಳನ್ನು ಮುಖಕ್ಕೆ ಕಟ್ಟಿಕೊಂಡು ಹೋಗಿದ್ದಾರೆ.
ಈ ವೇಳೆ, ಡಿವೈಎಸ್ಪಿ ಕೆ. ರಾಮರಾವ್, ಸಿಪಿಐ ಗಾಯತ್ರಿ, ಪಿ.ಎಸ್.ಐ ವೈಶಾಲಿ, ಸದ್ದಾಂ ಹುಸೇನ್, ನಾರಾಯಣ, ಗುರುರಾಜ್ ಹಾಗೂ ಶಾಂತಮೂರ್ತಿ, ಬೀರಪ್ಪ ಹಾಗೂ ಸಂಚಾರಿ ಠಾಣೆಯ ಪೊಲಿಸ್ ಪೇದೆ ಕೆಂಚಪ್ಪ ಹಾಜರಿದ್ದರು.