ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲೂ MIS-C ಗೆ ಮಗು ಬಲಿ: ಡಿಹೆಚ್​ಒ ಹೇಳೋದು ಹೀಗೆ - ಮಿಸ್​-ಸಿ ಆತಂಕ

ದಿನೇ ದಿನೇ ಮಕ್ಕಳಲ್ಲಿ MIS-C ಸೋಂಕು ಹೆಚ್ಚಾಗುತ್ತಿದ್ದು, ಹೊಸ ಕಾಯಿಲೆಗೆ ದಾವಣಗೆರೆಯಲ್ಲಿ ಮಗುವೊಂದು ಮೃತಪಟ್ಟಿದೆ. ಇದರ ಬೆನ್ನಲದ್ಲೇ ಬಳ್ಳಾರಿಯಲ್ಲೂ ಕಂದಮ್ಮವೊಂದು ಕೊನೆಯುಸಿರೆಳೆದಿದೆ.

Baby dies in Bellary due to MIS-C
ಬಳ್ಳಾರಿ-ವಿಜಯನಗರ ಡಿಹೆಚ್​ಒ ಡಾ. ಹೆಚ್​.ಎಲ್ .ಜನಾರ್ಧನ್

By

Published : Jul 3, 2021, 12:36 PM IST

Updated : Jul 3, 2021, 2:02 PM IST

ಬಳ್ಳಾರಿ : ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾದ ಮಕ್ಕಳಲ್ಲಿ ಮಿಸ್​-ಸಿ (MIS-C) ಸೋಂಕು ಹೆಚ್ಚಾಗುತ್ತಿದ್ದು, ವಿಮ್ಸ್ ಆಸ್ಪತ್ರೆಯ ಒಂದು ವರ್ಷದೊಳಗಿನ ಮಗು ಮೃತಪಟ್ಟಿದೆ. ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದ್ದು, ಮಗುವಿನ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಈ ಕುರಿತು 'ಈಟಿವಿ ಭಾರತ'​ನೊಂದಿಗೆ ಮಾತನಾಡಿದ ಬಳ್ಳಾರಿ - ವಿಜಯನಗರ ಜಿಲ್ಲೆಗಳ ಡಿಹೆಚ್​ಒ ಡಾ. ಹೆಚ್.ಎಲ್. ಜನಾರ್ಧನ್, ಮಿಸ್​- ಸಿ ಹೊಸ ರೂಪದ ಕಾಯಿಲೆಗೆ ಉಭಯ ಜಿಲ್ಲೆಗಳಲ್ಲಿ ಒಂದು ಮಗು ಬಲಿಯಾಗಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲಿ ಇದುವರೆಗೆ 29 ಮಕ್ಕಳು ಮಿಸ್​-ಸಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

ಬಳ್ಳಾರಿ-ವಿಜಯನಗರ ಡಿಹೆಚ್​ಒ ಡಾ. ಹೆಚ್​.ಎಲ್ .ಜನಾರ್ಧನ್

ಆ ಪೈಕಿ ಪ್ರಸ್ತುತ ಮೂರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

ಓದಿ : ದಾವಣಗೆರೆಯಲ್ಲಿ ​MIS-C ಸೋಂಕಿಗೆ ಐದು ವರ್ಷದ ಮಗು ಬಲಿ

ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಅಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಿಸ್​-ಸಿ ಕಾಯಿಲೆ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ರೋಗ ಗುಣಪಡಿಸಬಹುದು ಎಂದು ಹೇಳಿದರು.

Last Updated : Jul 3, 2021, 2:02 PM IST

ABOUT THE AUTHOR

...view details