ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ರಾಯಲ್ ವೃತ್ತದ ಮಾರ್ಗವಾಗಿ ಮೋತಿ ವೃತ್ತದವರೆಗೆ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಏಕತಾ ನಡಿಗೆ ಜಾಥಾಗೆ ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ಚಾಲನೆ ನೀಡಿದರು.
ಈ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸೈದುಲು ಅಡಾವತ್, ಕೋವಿಡ್ ಸಮಯದಲ್ಲಿ ಏಕಾತಾ ನಡಿಗೆ ನಡೆಯುವಾಗ ಮಧ್ಯದಲ್ಲಿ ಮಾತನಾಡುವುದು ಬೇಡ. ಹಾಗೆಯೇ ಜಾಥಾ ಸಾಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇದು ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಿದೆ ಎಂದರು.