ಕರ್ನಾಟಕ

karnataka

ಹೊಸಪೇಟೆ: ಮದುವೆಯಾಗಿ 5 ತಿಂಗಳಲ್ಲೇ ಶೀಲ ಶಂಕಿಸಿ ಗರ್ಭಿಣಿ ಹೆಂಡತಿಯ ಹೆಣ ಬೀಳಿಸಿದ ಕಿರಾತಕ!

By

Published : Sep 3, 2020, 9:44 AM IST

ಮದುವೆಯಾಗಿ ಐದು ತಿಂಗಳಲ್ಲೇ ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನ ಗಂಡನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಮದುವೆಯಾಗಿ 5 ತಿಂಗಳಿಗೆ ಶೀಲ ಶಂಕಿಸಿ ಹೆಂಡತಿಯ ಹೆಣ ಉರುಳಿಸಿದ ಕಿರಾತಕ
ಮದುವೆಯಾಗಿ 5 ತಿಂಗಳಿಗೆ ಶೀಲ ಶಂಕಿಸಿ ಹೆಂಡತಿಯ ಹೆಣ ಉರುಳಿಸಿದ ಕಿರಾತಕ

ಹೊಸಪೇಟೆ : ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೂಡ್ಲಿಗಿ ತಾಲೂಕಿನ ಮಡ್ಲಾಕನಹಳ್ಳಿಯಲ್ಲಿ ನಡೆದಿದೆ.

ವನಜಾಕ್ಷಿ( 20) ಕೊಲೆಯಾದ ಮಹಿಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವನಜಾಕ್ಷಿಯನ್ನ ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಐದು ತಿಂಗಳ ಹಿಂದಯಷ್ಟೇ ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದ ತಿಪ್ಪೇಶಿಯೊಂದಿಗೆ ಮದುವೆಯಾಗಿತ್ತು. ನಾಗರಪಂಚಮಿ ಹಬ್ಬಕ್ಕೆಂದು ವನಜಾಕ್ಷಿ ತವರು ಮನೆಗೆ ಬಂದಿದ್ದರು. ಆಗಿನಿಂದ ದಂಪತಿ ಮಧ್ಯೆ ಜಗಳ ಪ್ರಾರಂಭವಾಗಿದೆ. ಮೃತ ಮಹಿಳೆಯ ಸೋದರ ವೀರಭದ್ರಪ್ಪ ನೀಡಿದ ದೂರು ಆಧರಿಸಿ, ಸ್ಥಳೀಯ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details