ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ಕುರಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಿಲ್ಲ: ಶಾಸಕ ರಾಜುಗೌಡ - MLA Raju Gouda on CM change issue

ಸಿಎಂ ಬದಲಾವಣೆ ಕುರಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಿಲ್ಲ. ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು ಸಿಎಂ ಆಗಿ ಯಡಿಯೂರಪ್ಪ ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.

ಶಾಸಕ ರಾಜುಗೌಡ
ಶಾಸಕ ರಾಜುಗೌಡ

By

Published : Jul 20, 2021, 4:12 PM IST

ಹೊಸಪೇಟೆ: ಸಿಎಂ ಬದಲಾವಣೆ ಕುರಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಿಲ್ಲ. ಈ ಕುರಿತು ಹೈಕಮಾಂಡ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.

ಶಾಸಕ ರಾಜುಗೌಡ ಹೇಳಿಕೆ

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು ಸಿಎಂ ಆಗಿ ಯಡಿಯೂರಪ್ಪ ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಜು.26 ಕ್ಕೆ ಸರ್ಕಾರ ರಚನೆಯಾಗಿ 2 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಜು.25 ಕ್ಕೆ ಔತಣಕೂಟವನ್ನು ಆಯೋಜಿಸಲಾಗಿದೆ. ಇದಕ್ಕೆ ಕೆಲವರು ವಿಶೇಷ ಅರ್ಥವನ್ನು ನೀಡಿ ಮಾತನಾಡುತ್ತಿದ್ದಾರೆ. ನಾಯಕತ್ವದ ಕುರಿತು ಯಾವುದೇ ಗೊಂದಲವಿಲ್ಲ. ನಮ್ಮ ಕೆಲ ಶಾಸಕರು ಹಾಗೂ ಮಾಧ್ಯಮದಲ್ಲಿ ನಾಯಕತ್ವ ಕುರಿತು ಚರ್ಚೆಯಾಗುತ್ತಿದೆ ಎಂದರು.

ಆಡಿಯೋಗೆ ಹೆಚ್ಚಿನ ಮಹತ್ವ ನೀಡುತ್ತಿರೋ ಅಥವಾ ವ್ಯಕ್ತಿಗೆ ಹೆಚ್ಚಿನ ಮಹತ್ವ ನೀಡುತ್ತೀರಿ? ನಳಿನ್ ಕುಮಾರ್ ಕಟೀಲ್ ಸರಳ ಸಜ್ಜನ ರಾಜಕಾರಣಿ. ಹಾಗಾಗಿ ಅವರು ಆ ರೀತಿಯಲ್ಲಿ ಮಾತನಾಡುವುದಕ್ಕೆ ಸಾಧ್ಯವಿಲ್ಲ. ದುಡಿಕಿ ಹಾಗೂ ಆವೇಶದಲ್ಲಿ ಅವರು ಮಾತನಾಡುವುದಿಲ್ಲ. ನಳಿನ್ ಕುಮಾರ್ ಕಟೀಲ್ ಅವರ ಧ್ವನಿಯನ್ನು ಯಾರೋ ಡಬ್ ಮಾಡಿದ್ದಾರೆ ಎಂದರು.

ಕಾಂಗ್ರೆಸ್​ನಿಂದ 17 ಜನ ಶಾಸಕರು ಸಭೆ ಮಾಡಿರುವುದು ತಿಳಿದಿಲ್ಲ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಬದಲಾವಣೆಯಾಗುತ್ತಾರೆ ಎನ್ನುವುದರ ಚರ್ಚೆ ಮಾಡಿರಬಹುದು. ಹೈಕಮಾಂಡ್ ಯಾವ ಲಾಬಿಗೆ ಮಣಿಯುವುದಿಲ್ಲ. ಕೇಂದ್ರ ಸಂಪುಟದಲ್ಲಿ ಪಕ್ಷಕ್ಕೆ ದುಡಿದವರಿಗೆ ಸಚಿವ ಸ್ಥಾನವನ್ನು ನೀಡಲಾಯಿತು. ‌ಅಲ್ಲದೇ, ದೆಹಲಿಗೆ ನಾಯಕರು ಭೇಟಿ ನೀಡುವ ಕುರಿತು ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ನಾಯಕತ್ವ ಬದಲಾವಣೆಯಾಗುತ್ತೆ ಎಂದರೇ ನೂರು ಜನ ಹೋಗಿ ಬರುತ್ತಾರೆ. ಮಾಧ್ಯಮದಲ್ಲಿ ಬರಲು ದೆಹಲಿಗೆ ಹೋಗುತ್ತಿದ್ದಾರೆ ಎಂದರು.

ಕೊಪ್ಪಳದ ಯಲಬುರ್ಗಾದ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ನಾಯಕತ್ವ ಬದಲಾವಣೆಯ ಪ್ರಶ್ನೆ ಬರುವುದಿಲ್ಲ. ರಾಷ್ಟ್ರ ನಾಯಕರು ನಾಯಕತ್ವದ ಕುರಿತು ಮಾತನಾಡಿಲ್ಲ‌. ಬದಲಾವಣೆ ದಿಢೀರ್ ಆಗಿ ಎದ್ದಿದೆ ಎಂದರು.

ನಿನ್ನೆ ಸಚಿವ ಆನಂದ ಸಿಂಗ್ ಅವರ ತಂದೆ ಪೃಥ್ವಿರಾಜ್‌ ಸಿಂಗ್ ನಿಧರಾಗಿದ್ದರು. ಹಾಗಾಗಿ ಇಬ್ಬರು ಶಾಸಕರು ಆನಂದ ಸಿಂಗ್ ಅವರ ಮನೆಗೆ ತೆರಳಿ ಸ್ವಾಂತನ ಹೇಳಿದರು.

ABOUT THE AUTHOR

...view details