ಕರ್ನಾಟಕ

karnataka

ETV Bharat / state

ಬಳ್ಳಾರಿ: ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಶಾಸಕ ನಾಗೇಂದ್ರ ಸಹಾಯ ಹಸ್ತ

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪಅವರಿಗೆ ಎರಡು ಲಕ್ಷ ರೂ.ಗಳ ಚೆಕ್ಅನ್ನು ನೀಡಿದರು.

By

Published : Aug 4, 2020, 4:07 PM IST

Updated : Aug 4, 2020, 4:39 PM IST

MLA Nagendra
ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಶಾಸಕ ನಾಗೇಂದ್ರ ಸಹಾಯ ಹಸ್ತ

ಬಳ್ಳಾರಿ:ಕರ್ನಾಟಕ ಪ್ರದೇಶ ಕಾಂಗ್ರೆಸ್​​ ಸಮಿತಿಯು ಕೋವಿಡ್ -19 ಹಿನ್ನೆಲೆಯಲ್ಲಿ ರೂಪಿಸಿರುವ ಆರೋಗ್ಯ ಹಸ್ತ ಯೋಜನೆಗೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಕೈ ಜೋಡಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪಅವರಿಗೆ ಎರಡು ಲಕ್ಷ ರೂ.ಗಳ ಚೆಕ್ಅನ್ನು ದೇಣಿಗೆಯಾಗಿ ನೀಡಿದರು.

ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಶಾಸಕ ನಾಗೇಂದ್ರ ಸಹಾಯ ಹಸ್ತ

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ, ಆರೋಗ್ಯ ಹಸ್ತ ಕಾರ್ಯಕ್ರಮವನ್ನ ನನ್ನ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ಈ ದೇಣಿಗೆ ನೀಡಲಾಗುವುದೆಂದು ತಿಳಿಸಿದರು. ತಲಾ ನಾಲ್ಕು ಸಾವಿರ ರೂ.ಗಳಂತೆ ಐದು ಮಂದಿಯನ್ನ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಈ ಹಣವನ್ನ ಸದುಪಯೋಗಪಡಿಸಿಕೊಳ್ಳಬೇಕೆಂದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಮನೆಮನೆಗೆ ಭೇಟಿ ನೀಡಿ ಆಕ್ಸಿಜನ್ ಸ್ಯಾಚುರೇಷನ್ ತಪಾಸಣೆ ಹಾಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆಗೆ ಮಾಡಬೇಕು ಎಂದರು.

Last Updated : Aug 4, 2020, 4:39 PM IST

ABOUT THE AUTHOR

...view details