ಬಳ್ಳಾರಿ:ನಾಲ್ಕನೇಯ ಹಂತದ ಲಾಕ್ ಡೌನ್ ಜಾರಿಯಾದ ಹಿನ್ನಲೆ ಗಣಿನಾಡು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಒಂಭತ್ತು ವಾರ್ಡ್ಗಳಲ್ಲಿ ಶಾಸಕ ಬಿ. ನಾಗೇಂದ್ರ ಅವರು, ಆಹಾರ ಕಿಟ್ ವಿತರಿಸುತ್ತಿದ್ದಾರೆ. ವಿಶೇಷ ಅಂದ್ರೆ ತಲಾ ಒಂದೊಂದು ಕಿಟ್ ನಲ್ಲಿ ಒಂಭತ್ತು ಕೋಳಿ ಮೊಟ್ಟೆಗಳನ್ನ ವಿತರಿಸುತ್ತಿದ್ದಾರೆ.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂಭತ್ತು ವಾರ್ಡುಗಳಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಕಿಟ್ ಗಳಲ್ಲಿ ಮೊಟ್ಟೆ ಕೂಡ ಬಡ ಮತ್ತು ಕೂಲಿ ಕಾರ್ಮಿಕರ ಮನೆಗಳಿಗೆ ಸೇರುತ್ತಿವೆ. ಅಂದಾಜು 55 ಸಾವಿರಕ್ಕೂ ಅಧಿಕ ಆಹಾರ ಕಿಟ್ ಗಳ ವಿತರಣೆ ಮಾಡುವ ಗುರಿಯನ್ನು ಹೊಂದಿರುವ ಶಾಸಕ ನಾಗೇಂದ್ರ ಅವರು, ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಈ ಕಿಟ್ ಗಳನ್ನ ವಿತರಿಸುತ್ತಿದ್ದಾರೆ.