ಕರ್ನಾಟಕ

karnataka

By

Published : Oct 1, 2019, 1:10 PM IST

ETV Bharat / state

ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಕರೆ ನೀಡಿದ್ದ ಬಳ್ಳಾರಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ!

ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆ ಆಗ್ರಹಿಸಿ ಬಳ್ಳಾರಿಯಲ್ಲಿಂದು ನಡೆದ ಬಂದ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಗಡಿಗಿ ಚನ್ನಪ್ಪ ವೃತ್ತಕ್ಕೆ ಈ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘದ ಮುಖಂಡರು ಜಮಾಯಿಸಿ, ಅಲ್ಲಿಂದಲೇ ವಿವಿಧ ಘೋಷಣೆಗಳನ್ನು ಕೂಗಿದರು. ತುಂಗಭದ್ರಾ ರೈತ ಸಂಘ ಹಾಗೂ ನಾನಾ ಕನ್ನಡ ಪರ ಸಂಘಟನೆಗಳು ಗಡಿಗಿ ಚನ್ನಪ್ಪ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚುವ ಮುಖೇನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬಂದ್

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆ ಆಗ್ರಹಿಸಿ ಬಳ್ಳಾರಿಯಲ್ಲಿಂದು ನಡೆದ ಬಂದ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಗಡಿಗಿ ಚನ್ನಪ್ಪ ವೃತ್ತಕ್ಕೆ ಈ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘದ ಮುಖಂಡರು ಜಮಾಯಿಸಿ, ಅಲ್ಲಿಂದಲೇ ವಿವಿಧ ಘೋಷಣೆಗಳನ್ನು ಕೂಗಿದರು. ತುಂಗಭದ್ರಾ ರೈತ ಸಂಘ ಹಾಗೂ ನಾನಾ ಕನ್ನಡ ಪರ ಸಂಘಟನೆಗಳು ಗಡಿಗಿ ಚನ್ನಪ್ಪ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚುವ ಮುಖೇನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಪ್ರತಿನಿತ್ಯ ಬಳ್ಳಾರಿಯಿಂದ ವಿವಿಧ ಪ್ರದೇಶಗಳಾದ ಕುಡುತಿನಿ, ದರೋಜಿ, ಪಿ.ಕೆ ಹಳ್ಳಿ, ಹೊಸಪೇಟೆ, ತೋರಣಗಲ್ಲು ಜಿಂದಾಲ್ ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಬಸ್​ ಗಳಲ್ಲಿ ಪ್ರಯಾಣ ಮಾಡುವ ನೌಕರರು ಇಂದು ಬಸ್​ ಸೇವೆ ಇಲ್ಲದ ಕಾರಣ ರೈಲಿನಲ್ಲಿ ಪ್ರಯಾಣ ಮಾಡಿದರು.

ಆದರೆ ಇಂದು ಬೆಳಗ್ಗೆ ಹಂಪಿ ಎಕ್ಸ್‌ಪ್ರೆಸ್ ರೈಲು ಬಳ್ಳಾರಿಗೆ ಬೆಳಗ್ಗೆ 6 ಗಂಟೆ ಬರಬೇಕಿತ್ತು,ಆದರೆ 9 ಗಂಟೆ 30 ನಿಮಿಷಕ್ಕೆ ಬಂದ ಕಾರಣ, 7 ಗಂಟೆ ಬಂದ ವಿಜಯವಾಡ ಅಮರಾವತಿ ರೈಲಿನಲ್ಲಿ ಜನರು ಪ್ರಯಾಣ ಮಾಡಿದರು.

ಗಡಿಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ್ದ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘದ ಪದಾಧಿಕಾರಿಗಳು ಕೇವಲ ಮಾಧ್ಯಮಗಳ ಎದುರೇ ಫೋಸು ಕೊಡೋದನ್ನು ಬಿಟ್ಟು ಮಾನವ ಸರಪಳಿ ಮಾಡಿ ಎಂದು ರೈತ ಮುಖಂಡರಿಗೆ ತಾಕೀತು ಮಾಡಿದರು. ಅದರಿಂದ ಕೆಲಕಾಲ ಗೊಂದಲ ಉಂಟಾಯಿತು.

ದಾರಿ ಮಧ್ಯೆ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸುವ ವೇಳೆ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ. ಬಂದ್​ ನಿಧಾನವಾಗಿ ಕಾವೇರುತ್ತಿದ್ದು, ನಗರದಾದ್ಯಂತ ಪೊಲೀಸ್​ ಸರ್ಪಗಾವಲನ್ನು ಆಯೋಜಿಸಲಾಗಿದೆ.

ABOUT THE AUTHOR

...view details