ಕರ್ನಾಟಕ

karnataka

By

Published : Apr 1, 2021, 10:33 AM IST

ETV Bharat / state

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ: ವಾರ್ಡುವಾರು ಪ್ರಚಾರಕ್ಕಿಳಿದ ಸಚಿವ ಶ್ರೀರಾಮುಲು

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ‌ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವಾರ್ಡು​ವಾರು ಪ್ರಚಾರ ನಡೆಸಿದರು.

ವಾರ್ಡುವಾರು ಪ್ರಚಾರಕ್ಕಿಳಿದ ಸಚಿವ ಶ್ರೀರಾಮುಲು
Minister Sriramulu made campaign for Bellary Municipality election

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ‌ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವಾರ್ಡ್​​​​​ವಾರು ಪ್ರಚಾರ ನಡೆಸಿದರು.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಪ್ರಚಾರ

ನಗರದ ತೇರು ಬೀದಿಯಿಂದ ಪ್ರಚಾರ ಕಾರ್ಯವನ್ನು ಆರಂಭಿಸಿದ ನಾಯಕರು, ಬಾಲಾಂಜನೇಯ ಸ್ವಾಮಿ ದೇಗುಲ, ಕಾರ್ಕಲತೋಟ, ಗುಗ್ಗರಹಟ್ಟಿ ಆಂಜನೇಯ ಸ್ವಾಮಿ ದೇಗುಲ, ಬಳ್ಳಾರೆಪ್ಪ ಕಾಲೊನಿ, ಬಾಪೂಜಿ ನಗರ, ಆಂದ್ರಾಳ್ ರಾಮನಗುಡಿ, ಮರಿಸ್ವಾಮಿ‌ ಮಠ, ಗಣೇಶ ಗುಡಿ‌ ಮುಂದೆ, ಬನ್ನಪ್ಪ ಬಾವಿ, ಕಾಟೇಗುಡ್ಡ, ಶ್ರೀರಾಮ ದೇಗುಲ, ಗೋನಾಳ್, ಪಟೇಲ್ ನಗರ, ವೆಂಕಟೇಶ್ವರ ಗುಡಿ ಸೇರಿದಂತೆ ಇತರೆಡೆ ತೆರಳಿ ಆಕಾಂಕ್ಷಿಗಳ‌ ಪಟ್ಟಿಯನ್ನ ಸ್ವೀಕರಿಸಿದರು.

ಓದಿ: ಸಿಡಿ ಪ್ರಕರಣ: ಯುವತಿಯನ್ನು ಮಹಜರಿಗೆ ಕರೆದೊಯ್ಯಲಿರುವ ಎಸ್ಐಟಿ

ಪ್ರಚಾರ ಬಳಿಕ ಸಚಿವ ಶ್ರೀರಾಮುಲು ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಆಡಳಿತ ಇರಬೇಕು ಎಂಬ ಉದ್ದೇಶದೊಂದಿಗೆ ನಾನು ಮತ್ತು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಶತಾಯಗತಾಯವಾಗಿ ಶ್ರಮಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಕೂಡ ಬಿಜೆಪಿ ಸರ್ಕಾರ ಇದ್ದರೆ ವ್ಯಾಪಕವಾಗಿ ಅಭಿವೃದ್ಧಿಯ ಪರ್ವಾರಂಭ ಆಗಲಿದೆ ಎಂದರು.

ABOUT THE AUTHOR

...view details