ಬಳ್ಳಾರಿ: ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಗೆ ರಾಜ್ಯ ಸರ್ಕಾರ ಅಂದಾಜು 3,667 ಎಕರೆ ಭೂಮಿ ಪರಭಾರೆ ಮಾಡಿರೋದನ್ನ ಇಟ್ಟುಕೊಂಡೇ ಪ್ರತಿಪಕ್ಷದವರು ನನಗೆ ಪ್ರಚೋದನೆ ಮಾಡುತ್ತಿವೆ. ಅವರು ಏನೇ ಪ್ರಚೋದನೆ ಮಾಡಲಿ ಅಥವಾ ಸವಾಲು ಎಸೆದರೂ ಅದನ್ನ ಎದುರಿಸಲು ಸಮರ್ಥನಿದ್ದೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದ ಡಿಎಆರ್ ಮೈದಾನದಲ್ಲಿಂದು ನಡೆದ 112 ಸಹಾಯವಾಣಿ ಸಂಖ್ಯೆಯ 19 ಪೊಲೀಸ್ ಅಪರಾಧ ರಕ್ಷಣಾ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಸಮೂಹ ಸಂಸ್ಥೆಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡಿರೋದು ತರಾತುರಿಯಲ್ಲಿ ಆಗಿರಬಹುದು. ಆದರೆ, ನಾನು ಈಗಾಗಲೇ ಭೂಮಿ ಪರಭಾರೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿರುವೆ. ಅವರ ನಿಲುವು ಏನಿದೆ ಎಂಬೋದರ ಕುರಿತ ನೋಡಿಕೊಂಡು ನಂತರ ನನ್ನ ನಿರ್ಧಾರವನ್ನು ಸರ್ಕಾರದ ಮಟ್ಟದಲ್ಲಿ ತಿಳಿಸುವೆ ಎಂದರು.