ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಸರ್ಕಾರಿ ಐಟಿಐ ಕಾಲೇಜು ಮುಂಭಾಗದಲ್ಲಿ ಇಂದು ಸಂಜೆ ಕ್ರಿಕೆಟ್ ಆಟವಾಡಿದ ನಂತರ 50 ಕ್ಕಿಂತ ಹೆಚ್ಚಿನ ಯುವಕರನ್ನೊಳಗೊಂಡ ಗುಂಪು ಜಗಳ ಮಾಡಿಕೊಂಡಿದೆ.
ಬಳ್ಳಾರಿ: ಕ್ರಿಕೆಟ್ ಆಡುವ ಸ್ಥಳೀಯ ಯುವಕರ ಕಿರಿಕ್, ಬುದ್ಧಿವಾದ ಹೇಳಿ ಮನೆಗೆ ಕಳಿಸಿದ ಪೊಲೀಸರು - cricket
ಗಣಿನಾಡು ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಸರ್ಕಾರಿ ಐಟಿಐ ಕಾಲೇಜು ಮುಂಭಾಗದಲ್ಲಿ ಕ್ರಿಕೆಟ್ ಆಡಲು ಬಂದಿದ್ದ ಯುವಕರು ಆಟ ಮುಗಿಸಿದ ನಂತರ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
![ಬಳ್ಳಾರಿ: ಕ್ರಿಕೆಟ್ ಆಡುವ ಸ್ಥಳೀಯ ಯುವಕರ ಕಿರಿಕ್, ಬುದ್ಧಿವಾದ ಹೇಳಿ ಮನೆಗೆ ಕಳಿಸಿದ ಪೊಲೀಸರು local cricket playing boys fights](https://etvbharatimages.akamaized.net/etvbharat/prod-images/768-512-8530327-357-8530327-1598198406030.jpg)
ಕ್ರಿಕೆಟ್ ಆಡುವ ಸ್ಥಳೀಯ ಯುವಕರಿಂದ ಗಲಾಟೆ
ಕೆಲ ಯುವಕರ ಕುಡಿತ ಹಾಗೂ ಕ್ರಿಕೆಟ್ ಬೆಟ್ಟಿಂಗ್ಈ ಜಗಳಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ ಪ್ರತಿನಿತ್ಯ ನೂರಾರು ಯುವಕರು ಈ ಕಾಲೇಜು ಆವರಣದಲ್ಲಿ ಬೆಳಗ್ಗೆ, ಸಂಜೆ ಕ್ರಿಕೆಟ್ ಆಟವಾಡಲು ಸೇರಿರುತ್ತಾರೆ. ಇವರಿಗೆ ಯಾರೂ ಹೇಳೋರು ಇಲ್ಲ. ಇಲ್ಲಿಯ ಯುವಕರಿಗೆ ಪೊಲೀಸರ ಭಯವಿಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯ ಜನರು.
ಈ ಸಮಯದಲ್ಲಿ ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ಆಗಮಿಸಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದಾರೆ.