ಹೊಸಪೇಟೆ(ವಿಜಯನಗರ):ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಮಾರನಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದ್ದು, ಕುರಿಗಾಹಿಗೆ ಗಾಯವಾಗಿದೆ.
ಚಿರತೆ ದಾಳಿಗೆ ಮೇಕೆ ಬಲಿ: ಕುರಿಗಾಹಿಗೆ ಗಾಯ - leopard attacks man
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಮಾರನಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿ ನಡೆಸಿ ಮೇಕೆ ಕೊಂದಿದ್ದು, ಕುರಿಗಾಹಿ ಮೇಲೆಯೂ ದಾಳಿ ಮಾಡಿ ಗಾಯಗೊಳಿಸಿದೆ.
![ಚಿರತೆ ದಾಳಿಗೆ ಮೇಕೆ ಬಲಿ: ಕುರಿಗಾಹಿಗೆ ಗಾಯ leopard kills goat in hospete](https://etvbharatimages.akamaized.net/etvbharat/prod-images/768-512-10878687-thumbnail-3x2-car.jpg)
ಚಿರತೆ ದಾಳಿಗೆ ಮೇಕೆ ಬಲಿ
ಮಂಜುನಾಥ ಗಾಯಗೊಂಡ ಕುರಿಗಾಹಿ. ಕುರಿ ಮೇಯಿಸುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿ ಮಾಡುವಾಗ ಕುರಿಗಾಹಿ ಚೀರಾಟ ಕೇಳಿ ಸುತ್ತಮುತ್ತಲಿನ ಜನರು ಕೇಕೆ ಹಾಕಿದಾಗ ಚಿರತೆ ಓಡಿ ಹೋಗಿದೆ. ಇನ್ನು ಪದೇ -ಪದೆ ನಡೆಯುತ್ತಿರುವ ಚಿರತೆ ದಾಳಿಗಳಿಂದ ಜನರು ಭಯಭೀತರಾಗಿದ್ದಾರೆ. ಚಿರತೆ ಸೆರೆ ಹಿಡಿಯಲು ಬೋನು ಇಡಲು ಸ್ಥಳೀಯರು ಆಗ್ರಹಿಸಿದ್ದಾರೆ.