ಕರ್ನಾಟಕ

karnataka

ETV Bharat / state

ಬಳ್ಳಾರಿ: ಸಾಮಾಜಿಕ ಅಂತರ ಮರೆತು ಆಹಾರ ಪದಾರ್ಥಕ್ಕೆ ಮುಗಿಬಿದ್ದ ಬಾಣಂತಿಯರು - Siruguppa of Bellary district

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಲಾಕ್​ಡೌನ್​ ಆದೇಶಕ್ಕೆ ಕ್ಯಾರೆ ಎನ್ನದ ಬಾಣಂತಿಯರು ಆಹಾರ ಪದಾರ್ಥ ಪಡೆಯಲು ಮುಗಿಬಿದ್ದ ದೃಶ್ಯ ಕಂಡುಬಂತು.

Ladies grouped up to receive food grains by breaking social distance
ಸಾಮಾಜಿಕ ಅಂತರವನ್ನೂ ಮರೆತು ಆಹಾರ ಪದಾರ್ಥಕ್ಕೆ ಮುಗಿಬಿದ್ದ ಬಾಣಂತಿಯರು

By

Published : Apr 26, 2020, 9:09 AM IST

ಬಳ್ಳಾರಿ:ಲಾಕ್​ಡೌನ್​ ಹಿನ್ನೆಲೆ ಬಾಣಂತಿಯರಿಗೆ ಆಹಾರ ಪದಾರ್ಥಗಳ ವಿತರಣೆ ಮಾಡಲಾಯಿತು. ಆದರೆ, ವಿತರಣೆ ವೇಳೆ ಮಹಿಳೆಯರು ಅಧಿಕಾರಿಗಳು ಲಾಕ್​ಡೌನ್​ ಉದ್ದೇಶವನ್ನೇ ಮರೆತು ಗುಂಪು ಗುಂಪಾಗಿ ಸೇರಿದ್ದು ಕಂಡು ಬಂತು.

ಕೊರೊನಾ ನಿಯಂತ್ರಿಸಲು ಜಾರಿ ಮಾಡಿರುವ ಲಾಕ್ ಡೌನ್ ಆದೇಶ ಕೇವಲ ಹೆಸರಿಗೆ ಪಾಲನೆಯಾದಂತೆ ಕಾಣುತ್ತಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಲಾಕ್​ಡೌನ್​ ಆದೇಶಕ್ಕೆ ಕ್ಯಾರೆ ಎನ್ನದ ಜನರು ವಿತರಿಸಲಾಗುತ್ತಿದ್ದ ಆಹಾರ ಪದಾರ್ಥ ಪಡೆಯಲು ಮುಗಿಬಿದ್ದ ದೃಶ್ಯ ಕಂಡುಬಂತು.

ಇನ್ನೂ ಈ ವೇಳೆ ಮಹಿಳೆಯರು ಕನಿಷ್ಠ ಪಕ್ಷ ಮಾಸ್ಕ್ ಕೂಡ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯವಹಿಸಿದ್ದರು. ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ನಿಗಾ ವಹಿಸದಿರುವುದು ವಿಪರ್ಯಾಸವಾಗಿದೆ.

ABOUT THE AUTHOR

...view details