ಕರ್ನಾಟಕ

karnataka

ETV Bharat / state

ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ - ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ

ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ, ಕುರುಬ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.

ಸಚಿವ ಮಾಧುಸ್ವಾಮಿ ವಿರುದ್ಧ ಗಣಿನಗರಿಯಲ್ಲಿ ಯುವ ಕುರುಬರ ಪ್ರತಿಭಟನೆ

By

Published : Nov 21, 2019, 3:27 PM IST

ಬಳ್ಳಾರಿ:ಹುಳಿಯಾರು ಪಟ್ಟಣದ ಕನಕವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಕುರುಬ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.

ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಕುರುಬ ಸಮುದಾಯದ ಪ್ರತಿಭಟನೆ

ಗಡಗಿ ಚನ್ನಪ್ಪ ವೃತ್ತದ ಬಳಿ ಎಂ. ಜಿ. ಕನಕ ನೇತೃತ್ವದಲ್ಲಿ ಹತ್ತಾರು ಕುರುಬ ಸಮುದಾಯದ ಯುವಕರು ಜಮಾಯಿಸಿ ಕೆಲಕಾಲ ಸಚಿವರ ವಿರುದ್ಧ ಘೋಷಣೆ ಕೂಗಿದ್ರು. ಸಾರ್ವಜನಿಕ ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ ಇಂಥ ದುವರ್ತನೆ ತೋರಬಾರದಿತ್ತು. ಶಾಂತಿಸಭೆಯಲ್ಲಿ ಸಚಿವರು ತೋರಿದ ಈ ಉದ್ಧಟತನದ ವರ್ತನೆಯನ್ನು ಕುರುಬ ಸಮುದಾಯವು ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೂಡಲೇ ಸಚಿವರು ಈಶ್ವರಾನಂದಪುರಿ ಸ್ವಾಮೀಜಿ ಬಳಿ ಹೋಗಿ ಬಹಿರಂಗವಾಗಿಯೇ ಕ್ಷಮೆಯಾಚಿಸಬೇಕು. ಇಲ್ಲವಾದ್ರೆ ಕುರುಬ ಸಮುದಾಯದ ಪ್ರಬಲ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಕುರುಬ ಸಮುದಾಯದ ಯುವ ಮುಖಂಡರಾದ ಕೆ.ನಾಗರಾಜ ಬಂಡಿಹಟ್ಟಿ, ಗುಗ್ಗರಹಟ್ಟಿ ಶ್ರೀಕಾಂತ, ಅಮರಾಪುರ ಮಂಜುನಾಥ, ಕೋರ್ಟ್ ಮೋಹನ, ಕೊಳಗಲ್ಲು ವಿನಯ ಕುಮಾರ, ಕಕ್ಕಬೇವಿನಹಳ್ಳಿ ಹೊನ್ನಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

For All Latest Updates

ABOUT THE AUTHOR

...view details