ಕರ್ನಾಟಕ

karnataka

ETV Bharat / state

ಕೊರೊನಾ, ರಾಜಕೀಯ ಕುರಿತು ಕೋಡಿಹಳ್ಳಿ ಶ್ರೀ ನುಡಿದ್ರು ಈ ಭವಿಷ್ಯ..! - Kodihalli swamiji prediction about Corona

ಬಳ್ಳಾರಿಯಲ್ಲಿ ಕೋಡಿಹಳ್ಳಿ ಶ್ರೀಗಳು, ಕೊರೊನಾ ಮಹಮದ್ ಪೈಗಂಬರರ ಕುರಿತಾಗಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಎರಡೂ ಘಟನೆಗಳು ಇನ್ನೂ ಮಾರಕವಾಗಲಿವೆ ಎಂದಿದ್ದಾರೆ.

By

Published : Jun 11, 2022, 3:59 PM IST

ಬಳ್ಳಾರಿ:ಕೊರೋನಾ ಕುರಿತು ಕೋಡಿಹಳ್ಳಿ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ. 'ಇನ್ನು ಒಂದೂವರೆ ವರ್ಷದಲ್ಲಿ ಈ ಮಾರಿ ಹೋಗುತ್ತೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಕೋವಿಡ್ ಗಾಳಿಯ ಮೂಲಕವೂ ಬರಬಹುದು. ಉಸಿರಾಟದ ತೊಂದರೆಯಾಗಿ ಪ್ರಾಣ ಹಾನಿಯಾಗಹುದು. ಈ ಬಗ್ಗೆ ಮುಂಜಾಗ್ರತೆ ವಹಿಸಿಬೇಕು' ಎಂದು ಸಲಹೆ ನೀಡಿದ್ದಾರೆ.

ಮಳೆ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ಈ ಹಿಂದೆ ಕೆಂಡಾಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗುತ್ತೆ, ಬಯಲು ಮಲೆನಾಡಾಗುತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕೆಂಡಾಮಂಡಲ ಆಗ್ತಾ ಇದೆ. ಮುಂಗಾರುಮಳೆ ಇನ್ನೂ ಜಾಸ್ತಿಯಾಗುವ ಲಕ್ಷಣ ಕಾಣ್ತಾ ಇದೆ. ಈ ಬಾರಿ ದೊಡ್ಡ ನಗರಗಳಿಗೆ ತೊಂದರೆ ಹೆಚ್ಚಾಗಲಿದೆ ಎಂದಿದ್ದಾರೆ.

ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದಿರುವ ಶ್ರೀಗಳು, ರಾಜಕೀಯ ಅಸ್ಥಿರತೆ ಕಾಡುತ್ತೆ ಅಂತಾ ಮೊದಲೇ ಹೇಳಿದ್ದೆ. ಗುಂಪುಗಳಾಗ್ತವೆ ಅಂದಿದ್ದೆ. ಅದನ್ನು ಈಗ ಕಂಡುಕೊಂಡಿದ್ದೀರ. ದೇಶದಲ್ಲಿ ಅವಘಢ ಆಗುತ್ತೆ ಎಂದಿದ್ದೆ. ಅದು ಈಗ ಪ್ರಾರಂಭವಾಗಿದೆ. ಪೈಗಂಬರರನ್ನು ಅವಹೇಳನ ಮಾಡಿ, ಜಗತ್ತಿನಾದ್ಯಂತ ಸಮಸ್ಯೆ ಶುರುವಾಗಿದೆ. ಮುಂದೆ ಇದರಿಂದ ದೊಡ್ಡ ಅಪಾಯವೂ ಇದೆ ಎಂದು ಶ್ರೀಗಳು ಹೇಳಿದರು.

ಓದಿ:ಸಿಲಿಕಾನ್ ಸಿಟಿಯಲ್ಲಿ ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ: ಮೂವರು ಆರೋಪಿಗಳು ಅಂದರ್

ABOUT THE AUTHOR

...view details