ಕರ್ನಾಟಕ

karnataka

By

Published : May 4, 2022, 3:47 PM IST

ETV Bharat / state

ಭಕ್ತಿಯ ಪರಾಕಾಷ್ಠೆ: ಬೆನ್ನಿಗೆ ಕಬ್ಬಿಣದ ಕೊಕ್ಕೆ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು

ಕಾಳಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಕೆಲವರು ನಟ ದಿ. ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿ ಅಪ್ಪುಗೆ ವಿಶಿಷ್ಠ ಗೌರವ ಸಲ್ಲಿಸಿದರು.

Kalamma Devi Jatra Mahotsava
ಕಂಪ್ಲಿಯ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ

ಬಳ್ಳಾರಿ:ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದ ಕಾಳಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಮೈಯಿಗೆ ಶಸ್ತ್ರ, ಬೆನ್ನಿಗೆ ಕಬ್ಬಿಣದ ಕೊಕ್ಕೆ ಹಾಕಿಕೊಂಡು ರುಬ್ಬು ಗುಂಡು ಹಾಗೂ ಆಟೋ ಎಳೆದು ಭಕ್ತಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ.

ಕಂಪ್ಲಿಯ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ

ದೇವರ ಹೆಸರಲ್ಲಿ ಉಪವಾಸವಿದ್ದು, ಮುಡಿ ನೀಡಿ ಅಥವಾ ವಿಶಿಷ್ಟ ರೀತಿಯ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ಸರ್ವೇ ಸಾಮಾನ್ಯ. ಆದರೆ, ಕಂಪ್ಲಿಯ ಮೀನುಗಾರರು ಆಚರಿಸುವ ಕಾಳಮ್ಮ ದೇವಿ ಜಾತ್ರೆಯಲ್ಲಿ ಭಕ್ತರು ಈ ರೀತಿ ದೇಹವನ್ನು ದಂಡಿಸಿ ದೇವಿಗೆ ಹರಕೆ ತೀರಿಸಿದ್ದಾರೆ. ಈ ಬಾರಿ 15ಕ್ಕೂ ಹೆಚ್ಚು ಜನರು ವಿಭಿನ್ನವಾಗಿ ತಮ್ಮ ಹರಕೆ ನೆರವೇರಿಸಿದ್ದಾರೆ.

ಮೈಯಿಗೆ ಶಸ್ತ್ರ ಹಾಕಿಕೊಂಡು‌ ಆಟೋ‌‌ ಎಳೆಯುವುದು, ಬೆನ್ನಿಗೆ ಕಬ್ಬಿಣದ ಕೊಕ್ಕೆ ಹಾಕಿಕೊಂಡು ಕಿಮೀ‌ ಗಟ್ಟಲೇ ರುಬ್ಬುಗುಂಡನ್ನು ಭಕ್ತರು ಎಳೆದರು. ಕೆಲ ಭಕ್ತರು ಬಾಯಿಗೆ ಕಬ್ಬಿಣದ ಸರಳುಗಳನ್ನು ಹಾಕಿಕೊಂಡು ಸಾಗಿದರು. ಇದನ್ನು ನೋಡಿದವರ ಮೈಜುಮ್ ಎನ್ನುವಂತಿತ್ತು.

ಇದನ್ನೂ ಓದಿ:ಮನಿ ಡಬಲ್ ಆಮಿಷಕ್ಕೆ ಯಾಮಾರಿದ್ರು: 10 ಲಕ್ಷ ರೂ. ಇದೆ ಎಂದ ಬ್ಯಾಗ್​ನಲ್ಲಿ ಸಿಕ್ಕಿದ್ದು 'ನೋಟು'ಗಳಲ್ಲ!

ABOUT THE AUTHOR

...view details