ಕರ್ನಾಟಕ

karnataka

By

Published : Oct 12, 2019, 8:10 AM IST

ETV Bharat / state

ದಲಿತರನ್ನು ಹತ್ತಿಕ್ಕುವ ಉದ್ದೇಶದಿಂದ ಪರಮೇಶ್ವರ್​ ಮೇಲೆ ಐಟಿ ದಾಳಿ: ಬಸವರಾಜ್ ವಾಗ್ದಾಳಿ

ಡಾ.ಜಿ ಪರಮೇಶ್ವರ್​ ಅವರ ಮೇಲೆ ಐಟಿ ದಾಳಿ ಖಂಡಿಸಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್​ ಯುವಸೈನ್ಯ ತೀವ್ರ ವಿರೋಧ ವ್ಯಕ್ತಪಡಿಸಿದೆ.

ದಲಿತರನ್ನು ಹತ್ತಿಕ್ಕುವ ಉದ್ದೇಶದಿಂದ ಪರಮೇಶ್ವರ್​ ಮೇಲೆ ಐಟಿ ದಾಳಿ ...ಬಸವರಾಜ್ ವಾಗ್ದಾಳಿ

ಬಳ್ಳಾರಿ:ದಲಿತ ಮತ್ತು ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ತುಮಕೂರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಡಾ.ಜಿ ಪರಮೇಶ್ವರ್​ ಅವರ ಮೇಲೆ ಐಟಿ ದಾಳಿ ಖಂಡಿಸಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್​ ಯುವಸೈನ್ಯ ತೀವ್ರ ವಿರೋಧ ವ್ಯಕ್ತಪಡಿಸಿದೆ.

ದಲಿತರನ್ನು ಹತ್ತಿಕ್ಕುವ ಉದ್ದೇಶದಿಂದ ಪರಮೇಶ್ವರ್​ ಮೇಲೆ ಐಟಿ ದಾಳಿ ...ಬಸವರಾಜ್ ವಾಗ್ದಾಳಿ

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ಬಸವರಾಜ್, ಉದ್ದೇಶ ಪೂರಕವಾದ ಐಟಿ ದಾಳಿ ನಡೆಸಿ ರಾಜಕೀಯ ಅಲ್ಪ ಸಂಖ್ಯಾತರಾಗಿರುವ ದಲಿತ ವರ್ಗವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ‌

ಇನ್ನೂ ಪರಮೇಶ್ವರ್​ ಅವರ ತಂದೆ ಗಂಗಾಧರಪ್ಪ ಅವರು 60 ವರ್ಷಗಳ ಹಿಂದೆಯೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದಾರೆ‌. ಅದರಲ್ಲಿ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ ಎಂದರು. ಆದರೀಗ ಐಟಿ ದಾಳಿ ಉತ್ತಮ ನಡೆಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ ಯುವಸೈನ್ಯದ ಕೆ.ನಾಗರಾಜ್, ಶಿವ ಕುಮಾರ್, ಸೂರ್ಯನಾರಾಯಣ, ಸಿದ್ದಲಿಂಗ, ಬಸವರಾಜ್ ,ರಾಮಚಂದ್ರ ಮತ್ತು ಇನ್ನಿತರರು ಹಾಜರಿದ್ದರು.

ABOUT THE AUTHOR

...view details