ಕರ್ನಾಟಕ

karnataka

By

Published : Jul 11, 2020, 3:25 PM IST

Updated : Jul 11, 2020, 3:48 PM IST

ETV Bharat / state

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ: ರೈತರ‌ ಮೊಗದಲಿ ಮಂದಹಾಸ

ಶುಕ್ರವಾರ ತುಂಗಭದ್ರಾ ಜಲಾಶಯಕ್ಕೆ 26,007 ಕ್ಯೂಸೆಕ್ ಹರಿದು ಬಂದಿದೆ. ಈ ಎರಡು ದಿನದಲ್ಲೇ 2 ಟಿಎಂಸಿಗಿಂತಲೂ ಅಧಿಕ ನೀರು ಸಂಗ್ರಹವಾಗಿದೆ.

Tungabhadra reservoir
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ

ಬಳ್ಳಾರಿ : ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಶನಿವಾರ‌ ಅಂದಾಜು 34,374 ಕ್ಯೂಸೆಕ್ ನೀರು ಹರಿದು ಬಂದಿದ್ದು, 302 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರಕ್ಕೆ ಹರಿ ಬಿಡಲಾಗುತ್ತಿದೆ.

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ

ಶುಕ್ರವಾರ 26,007 ಕ್ಯೂಸೆಕ್ ಹರಿದು ಬಂದಿತ್ತು. ಈ ಎರಡು ದಿನದಲ್ಲೇ 2 ಟಿಎಂಸಿಗಿಂತಲೂ ಅಧಿಕ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದಲ್ಲಿ 18 ಟಿಎಂಸಿ ನೀರಿದೆ. ಒಟ್ಟು 1633 ಅಡಿ ಎತ್ತರ ಇರುವ ಜಲಾಶಯದಲ್ಲಿ ಇಂದು 1598.85 ಅಡಿವರೆಗೂ ನೀರು ತುಂಬಿಕೊಂಡಿದೆ. ಜಲಾಶಯಕ್ಕೆ ಗುರುವಾರ 16,211 ಕ್ಯೂಸೆಕ್, ಬುಧವಾರ 7,321 ಕ್ಯೂಸೆಕ್ ನೀರು ಹರಿದು ಬಂದಿದೆ. ಕಳೆದ ಮೂರು ದಿನಗಳಿಂದ ದಿನದಿಂದ ಜಲಾಶಯದ ಒಳಹರಿವಿನಲ್ಲಿ ಏರಿಕೆ ಆಗುತ್ತಲೇ ಇದೆ.

ಕಳೆದ ವರ್ಷ ಈ ವೇಳೆಯಲ್ಲಿ 4.015 ಟಿಎಂಸಿ ಸಂಗ್ರಹವಿತ್ತು. ಆದರೆ, ಈ ಬಾರಿ ಜಲಾಶಯಕ್ಕೆ ಉತ್ತಮ ಒಳಹರಿವು ದಾಖಲಾಗಿದ್ದರಿಂದ ಸಂಗ್ರಹಮಟ್ಟ ಅಧಿಕವಾಗಿದೆ.

ಶಿವಮೊಗ್ಗ, ದಾವಣಗೆರೆ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿ ಬಿಡಲಾಗುತ್ತಿದೆ.

Last Updated : Jul 11, 2020, 3:48 PM IST

ABOUT THE AUTHOR

...view details