ಕರ್ನಾಟಕ

karnataka

ETV Bharat / state

ಹಿಂದಿನ ನಿರ್ದೇಶಕರ ಅವಧಿಯಲ್ಲಾದ ನೇಮಕಾತಿ ಪ್ರಕ್ರಿಯೆ ಬಗ್ಗೆ ನಾನು ಕಮೆಂಟ್ ಮಾಡಲ್ಲ: ವಿಮ್ಸ್​ ನಿರ್ದೇಶಕ - ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ

ಬಳ್ಳಾರಿಯ ವಿಮ್ಸ್​ನಲ್ಲಿ ಮಾಜಿ ನಿರ್ದೇಶಕರ ಅವಧಿಯಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ಬಗ್ಗೆ ಯಾವುದೇ ಕಾಮೆಂಟ್​ ಮಾಡೋದಿಲ್ಲ ಎಂದು ವಿಮ್ಸ್​ ನಿರ್ದೇಶಕರು ತಿಳಿಸಿದ್ದಾರೆ.

vims director
ಡಾ.ಟಿ.ಗಂಗಾಧರಗೌಡ

By

Published : Jan 24, 2021, 8:35 PM IST

ಬಳ್ಳಾರಿ: ದಿವಂಗತ ಲಕ್ಷ್ಮೀನಾರಾಯಣರೆಡ್ಡಿಯವರ ಅಧಿಕಾರದ ಅವಧಿಯಲ್ಲಾದ ನೇಮಕಾತಿ ಪ್ರಕ್ರಿಯೆಗೆ ನಾನೇನು ಕಮೆಂಟ್ ಮಾಡೋಕೆ ಹೋಗಲ್ಲ ಎಂದು ವಿಮ್ಸ್​ನ ಹಾಲಿ ನಿರ್ದೇಶಕ ಡಾ. ಟಿ.ಗಂಗಾಧರಗೌಡ ಅಭಿಪ್ರಾಯಪಟ್ಟಿದ್ದಾರೆ.

ವಿಮ್ಸ್ ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾತನಾಡಿದ ನಿರ್ದೇಶಕ

ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಅಂದಾಜು 68 ಮಂದಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅಂಥಹದ್ದೇನು ಅಕ್ರಮ ನಡೆದಿಲ್ಲ. ಆದರೆ ನಿಗದಿತ ಹುದ್ದೆಗಳಿಗಿಂತಲೂ ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಅಂದಾಜು 150 ಮಂದಿಯನ್ನು ಹಿಂದಿನ ನಿರ್ದೇಶಕರಾಗಿದ್ದ ದಿವಂಗತ ಎಲ್.ಎನ್.ರೆಡ್ಡಿಯವರು ನೇಮಕಾತಿ ಮಾಡಿಕೊಂಡಿದ್ದಾರೆ ಎಂದು ಹಾಲಿ ನಿರ್ದೇಶಕ ಡಾ. ಗಂಗಾಧರಗೌಡ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಆದರೆ ಆಗ ಅಷ್ಟೊಂದು ಹುದ್ದೆಗಳ‌ ನೇಮಕಾತಿ ಅಗತ್ಯ ಇತ್ತು. ಯಾಕಂದ್ರೆ 517 ಬೆಡ್​ಗಳಿಂದ 1017 ಬೆಡ್​ಗಳಿಗೆ ವಿಮ್ಸ್ ಆಸ್ಪತ್ರೆ ವಿಸ್ತಾರಗೊಂಡಿದೆ. ಹೀಗಾಗಿ 150 ಮಂದಿ ನೇಮಕಾತಿ ಪ್ರಕ್ರಿಯೆ ಏನೂ ನಮಗೆ ಹೊರೆಯಾಗಿಲ್ಲ. ಆದರೆ ಅವರನ್ನು ಮುಂದುವರಿಸೋದು ಅಥವಾ ಕೈಬಿಡೋದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಗೊಂಡವರನ್ನು ಆಯಾ ಹುದ್ದೆಗಳಲ್ಲಿ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರದ ಮುಂದಿನ ಆದೇಶದ ಮೇರೆಗೆ ಅವರನ್ನು ಹುದ್ದೆಯಲ್ಲಿ ಮುಂದುವರಿಸಲಾಗುವುದು ಎಂದರು.

ಇದನ್ನೂ ಓದಿ:ಸರಳವಾಗಿ ನಡೆದ ಶ್ರೀ ಮಹಾದೇವ ತಾತರ 33ನೇ ಪುಣ್ಯಸ್ಮರಣೆಯ ಜಾತ್ರೆ

ಕೋವಿಡ್ ಸಂದರ್ಭದಲ್ಲೂ ಕೂಡ ಈ ಹುದ್ದೆಗಳ‌ ಅನಿವಾರ್ಯತೆ ಇತ್ತು. ಹೀಗಾಗಿ ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡಿರಬಹುದೇನೋ ನನಗಂತೂ ಗೊತ್ತಿಲ್ಲ. ಹಿಂದಿನ ನಿರ್ದೇಶಕರ ಅವಧಿಯಲ್ಲಾದ ಈ ನೇಮಕಾತಿ ಪ್ರಕ್ರಿಯೆ ಕುರಿತು ನಾನಂತೂ ಹೆಚ್ಚಾಗಿ ಕಮೆಂಟ್ ಮಾಡೋಕೆ ಹೋಗಲ್ಲ ಎಂದು ಹೇಳಿದರು.

ABOUT THE AUTHOR

...view details