ಹೊಸಪೇಟೆ (ಬಳ್ಳಾರಿ): ಹೊಸಪೇಟೆಯಲ್ಲಿ ದಸರಾ ಹಬ್ಬದ ಅಂಗವಾಗಿ ನೆರವೇರಿದ ಪಲ್ಲಕ್ಕಿ ಉತ್ಸವದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಭಾಗಿಯಾದರು.
ದಸರಾ ಹಬ್ಬದ ಪ್ರಯುಕ್ತ ಸಚಿವ ಆನಂದ ಸಿಂಗ್ ಅವರಿಂದ ಪಲ್ಲಕ್ಕಿ ಸೇವೆ - Pallakki worship by Minister Anand Singh
ಹೊಸಪೇಟೆಯಲ್ಲಿ ದಸರಾ ಹಬ್ಬದ ಅಂಗವಾಗಿ ನೆರವೇರಿದ ಪಲ್ಲಕ್ಕಿ ಉತ್ಸವದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಭಾಗಿಯಾದರು. ಸ್ವತಃ ಸಚಿವರೇ ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಉತ್ಸವಕ್ಕೆ ಚಾಲನೆ ನೀಡಿದರು.
ದಸರಾ ಹಬ್ಬದ ಪ್ರಯುಕ್ತ ಸಚಿವ ಆನಂದ ಸಿಂಗ್ ಅವರಿಂದ ಪಲ್ಲಕ್ಕಿ ಸೇವೆ
ದಸರಾ ಹಬ್ಬದ ಪ್ರಯುಕ್ತ ಸಚಿವ ಆನಂದ ಸಿಂಗ್ ಅವರಿಂದ ಪಲ್ಲಕ್ಕಿ ಸೇವೆ
ವಿಧಾನಸಭಾ ಚುನಾವಣೆಯಲ್ಲಿ ಆನಂದ ಸಿಂಗ್ ಅವರು ಸತತವಾಗಿ ನಾಲ್ಕನೇ ಬಾರಿ ವಿಜಯಶಾಲಿಯಾಗಿದ್ದರಿಂದ ವಾಲ್ಮೀಕಿ ಸಮಾಜದ 5 ಕೇರಿಗಳಿಗೆ ತಲಾ 9 ಕೆಜಿ ಬೆಳ್ಳಿ ದೇಣಿಗೆ ನೀಡಿದ್ದರು. ಈಗ ಆ ಬೆಳ್ಳಿ ಬಳಸಿ ಪಲ್ಲಕ್ಕಿಯನ್ನು ಸಿದ್ಧಗೊಳಿಸಲಾಗಿದ್ದು, ಸ್ವತಃ ಸಚಿವರೇ ಅದನ್ನು ಹೆಗಲ ಮೇಲೆ ಹೊತ್ತು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಸಚಿವರು ಮೊದಲಿಗೆ ನಗರದ ಉಕ್ಕಡಕೇರಿಯ ಹುಲಿಗೇಮ್ಮ ದೇವಿ, ಜಲದುರ್ಗಾ ದೇವಿ ಹಾಗೂ ತಳವಾರ ಕೇರಿಯ ರಾಂಪುರದುರ್ಗಮ್ಮ ದೇವಿಯ ಪಲ್ಲಕ್ಕಿಯ ಪ್ರದಕ್ಷಿಣೆ ಹಾಕಿದರು.