ಕರ್ನಾಟಕ

karnataka

By

Published : Nov 8, 2019, 4:57 PM IST

ETV Bharat / state

ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ​ ರೈತರ ಒತ್ತಾಯ, ಪ್ರತಿಭಟನೆ

ಐ.ಎಸ್.ಆರ್.ಕಬ್ಬಿನ ಕಾರ್ಖಾನೆ ಪುನರ್​ ಆರಂಭಿಸುವಂತೆ ಆಗ್ರಹಿಸಿ ರೈತರು ನಗರದ ಚಿತ್ತವಾಡಿಯಲ್ಲಿರುವ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.

Hospet farmers protest

ಹೊಸಪೇಟೆ:ಐ.ಎಸ್.ಆರ್.ಕಬ್ಬಿನ ಕಾರ್ಖಾನೆ ಪುನರ್​ ಆರಂಭಿಸುವಂತೆ ಮತ್ತು ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ವಿಜಯನಗರ ರೈತ ಹೋರಾಟ ಸಮಿತಿಯ ಸದಸ್ಯರು ನಗರದ ಚಿತ್ತವಾಡಿಯಲ್ಲಿರುವ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ 4 ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ಕಬ್ಬಿನ ಎಲ್ಲ ಕಾರ್ಖಾನೆಗಳನ್ನು ಮುಚ್ಚಿದ್ದಾರೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಕಬ್ಬನ್ನು ಬೆಳೆಯುವುದರಿಂದ ಸಾರಿಗೆ ಭತ್ಯೆ ಭರಿಸಲು ತೊಂದರೆಯಾಗುತ್ತಿದೆ ಎಂದರು.

ರೈತರ ಪ್ರತಿಭಟನೆ

ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದರಿಂದ ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿದಂತಾಗತ್ತದೆ. ಕೂಲಿ ಕಾರ್ಮಿಕರಿಗೆ, ಬಡ ರೈತರಿಗೆ ಅನೂಕೂಲವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ, ರೈತರ ಸಮಸ್ಯೆಗಳಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ABOUT THE AUTHOR

...view details