ಬಳ್ಳಾರಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಹಿನ್ನೆಲೆ ಗಾಂಧಿನಗರದ ವಾಲ್ಮೀಕಿ ಹಾಸ್ಟೆಲ್ ಬಳಿ ಶುಭಕೋರಿ ಹಾಕಲಾಗಿದ್ದ ಬ್ಯಾನರ್ಗೆ ಕಲ್ಲುತೂರಿ, ಹರಿದು ಹಾಕಲಾಗಿದ್ದು, ಈ ಹಿನ್ನೆಲೆ ರೆಡ್ಡಿ ಬಳಗದ ಆಪ್ತರ ಮಧ್ಯೆ ಕಾಳಗ ನಡೆದಿದೆ.
ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ - ಬಳ್ಳಾರಿ ಸುದ್ದಿ
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತರಾಗಿರುವ ಪ್ರಕಾಶ್ ಬೆಂಬಲಿಗ ಬ್ಯಾನರ್ಗೆ ಕಲ್ಲು ತೂರಾಟ ನಡೆಸಿ, ಬ್ಯಾನರ್ ಹರಿದು ಹಾಕಿದ್ದಾನೆ. ಪೊಲೀಸರ ಮಧ್ಯ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ
ಶುಭಕೋರಿದ್ದ ಬ್ಯಾನರ್ನಲ್ಲಿ ಕಾಂಗ್ರೆಸ್ ಮುಖಂಡ ಎನ್.ಸೂರ್ಯನಾರಾಯಣರೆಡ್ಡಿ ಅವರ ಭಾವಚಿತ್ರ ಇದ್ದಿದ್ದಕ್ಕೆ , ಮಾಜಿ ಸಚಿವರೊಬ್ಬರ ಆಪ್ತರಾಗಿರುವ ಪ್ರಕಾಶ್ ಬೆಂಬಲಿಗ ಬ್ಯಾನರ್ಗೆ ಕಲ್ಲು ತೂರಾಟ ನಡೆಸಿ, ಬ್ಯಾನರ್ ಹರಿದು ಹಾಕಿದ್ದಾನೆ. ಈ ವೇಳೆ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ನಾಯಕರೊಬ್ಬರ ಬೆಂಬಲಿಗರು ಬ್ಯಾನರ್ ಹರಿದ ವ್ಯಕ್ತಿಯ ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಈ ಘಟನೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಗಾಂಧಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated : Oct 16, 2019, 1:17 AM IST