ಕರ್ನಾಟಕ

karnataka

ETV Bharat / state

2 ವರ್ಷಗಳಿಂದ ಸಹಾಯಧನ ನೀಡದ ಆರೋಪ...ಹಂಪಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ - ಸಹಾಯಧನ ನೀಡದ ಹಂಪಿ ವಿವಿ ವಿರುದ್ಧ ಪ್ರತಿಭಟನೆ

ಹಂಪಿ ಕನ್ನಡ ವಿವಿಯು ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ಮಂಜೂರು ಮಾಡ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಹಂಪಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

By

Published : Oct 25, 2019, 9:54 AM IST

ಹೊಸಪೇಟೆ/ಬಳ್ಳಾರಿ:ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ವಿಶ್ವವಿಶ್ವವಿದ್ಯಾಲಯವು ಮಂಜೂರು ಮಾಡ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.

ಎರಡು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ನೀಡುತ್ತಿಲ್ಲ.ಈ ಕಾರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ರು. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.ದಲಿತ ಸಮುದಾಯದ 500 ವಿದ್ಯಾರ್ಥಿಗಳು ಸಂಶೋಧನೆಯಲ್ಲಿದ್ದಾರೆ. 2016_17 ನೇ ಸಾಲಿನ ವಿದ್ಯಾರ್ಥಿಗಳು ಬಾಕಿ ಹಣ ಹಾಗೆ ಇದೆ. 2017_18 ನೇ ವರ್ಷದ ಸಹಾಯಧನವನ್ನು ಮಂಜೂರು ಮಾಡಿಲ್ಲ.,2018_19 ನೇ ಸಾಲಿನಲ್ಲಿ ಸಹಾಯ ಧನವು ಮಂಜೂರಾಗದೇ ಇರುವುದು ದೊಡ್ಡ ದುರಂತ ಎನ್ನುತ್ತಾರೆ ವಿದ್ಯಾರ್ಥಿಗಳು.

ಹಂಪಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಸಹಾಯಧನ ಮಂಜೂರಾತಿಗಾಗಿ ಈ ಹಿಂದೆ ಕೂಡ ಹೋರಾಟ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.ನಮಗೆ ಸಿಗುವಂತಹ ಹಣವು ಸಿಗುತ್ತಿಲ್ಲ ಎಂದು ಸಂಶೋಧ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಸಂಶೋಧನಾ ವಿದ್ಯಾರ್ಥಿಗಳ ಬೇಡಿಕೆಗಳು:
ಬಾಕಿ ಉಳಿಸಿಕೊಂಡಿರು ಹಣವನ್ನು ತಕ್ಷಣವೇ ನೀಡಬೇಕು.
ಸಹಾಯಧನವನ್ನು10 ಸಾವಿರದಿಂದ 20 ಸಾವಿರ ರೂ.ಗೆ ಹೆಚ್ಚಿಸಬೇಕು
ವಸತಿಯ ನಿಲಯವನ್ನು ಕಲ್ಪಿಸಿಕೊಡಬೇಕು
ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಬೇಕು.
ಎಲ್ಲಾ ವಿದ್ಯಾರ್ಥಿಗಳಿಗೆ ಹಕ್ಕುಗಳು ಸಮಾನಾಗಿ ಹಂಚಿಕೆಯಾಗಬೇಕು

ABOUT THE AUTHOR

...view details