ಕರ್ನಾಟಕ

karnataka

ETV Bharat / state

ಹೊಸಪೇಟೆ: ಗುಂಡಿಗಳ ತಾಣಗಳಾದ ಸರ್ಕಾರಿ ಕಚೇರಿಗಳ ಆವರಣಗಳು - SITE OF POTHOLES STORY

ಹೊಸಪೇಟೆ ನಗರದ ತಹಶೀಲ್ದಾರ್ ಕಚೇರಿ, ಆರ್​ಟಿಒ ಕಚೇರಿ, ಕೆಇಬಿ ಕಚೇರಿ ಹಾಗೂ‌ ಕೃಷಿ ಇಲಾಖೆ ಕಚೇರಿಗಳ ಆವರಣಗಳು ಗುಂಡಿಗಳಿಂದ ಕೂಡಿದ್ದು, ರಸ್ತೆ ಎಲ್ಲಿದೇ ಎಂಬುದು ಕಾಣಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸರ್ಕಾರಿ ಕಚೇರಿಗಳ ಆವರಣಗಳು
ಸರ್ಕಾರಿ ಕಚೇರಿಗಳ ಆವರಣಗಳು

By

Published : Sep 16, 2020, 10:53 PM IST

ಹೊಸಪೇಟೆ:ನಗರದ ಸರ್ಕಾರಿ ಕಚೇರಿಗಳ ಆವರಣಗಳು ಗುಂಡಿಗಳ‌ ತಾಣವಾಗಿ ಮಾರ್ಪಾಡಾಗಿದ್ದು, ಸಮಸ್ಯೆಗಳನ್ನು ಪರಿಹರಿಸಲುಸಿಕೊಳ್ಳಲು ಬರುವ ಜನರು ತೊಂದರೆ ಅನುಭವಿಸುವಂತಾಗಿದೆ.

ನಗರದ ತಹಶೀಲ್ದಾರ್ ಕಚೇರಿ, ಆರ್​ಟಿಒ, ಕೆಇಬಿ ಹಾಗೂ‌ ಕೃಷಿ ಇಲಾಖೆ ಕಚೇರಿಗಳ ಆವರಣಗಳು ಗುಂಡಿಗಳಿಂದ ಕೂಡಿದ್ದು, ರಸ್ತೆ ಎಲ್ಲಿದೇ ಎಂಬುದು ಕಾಣಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ‌ಮಳೆಗಾಲ ಆರಂಭವಾದರೆ ಸಾಕು ಕಚೇರಿಗಳ ಆವರಣ ಗುಂಡಿಗಳ ತಾಣವಾಗುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿಲ್ಲ.‌ ಕೇವಲ ಕಚೇರಿ ಕೋಣೆಗೆ ಸಿಮೀತರಾಗಿದ್ದಾರೆ.‌ ಮಳೆಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ತಹಶೀಲ್ದಾರ್ ಎಚ್.ವಿಶ್ವನಾಥ್ ಈ ಕುರಿತು‌ ಮಾತನಾಡಿ, ಸತತ ಮಳೆಯಾಗುತ್ತಿದೆ ‌ಹಾಗಾಗಿ ಗುಂಡಿಗಳು ನಿರ್ಮಾಣಗೊಂಡಿವೆ.‌ ಗುಂಡಿಗಳಿಗೆ ಗ್ರಾವೆಲ್ ಹಾಕಿಸಿ ಸಮಸ್ಯೆ ಪರಿಹರಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ABOUT THE AUTHOR

...view details