ಕರ್ನಾಟಕ

karnataka

By

Published : Aug 9, 2019, 11:41 PM IST

ETV Bharat / state

ಬಿಸಿ ಗಂಜಿ ಪಾತ್ರೆಗೆ ಬಿದ್ದ ಬಾಲಕಿ: ಪ್ರಾಣಾಪಾಯದಿಂದ ಪಾರು

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಅಂಗವಾಡಿ ಕೇಂದ್ರದಲ್ಲಿ ಬಾಲಕಿಯೊಬ್ಬಳು ಬಿಸಿ ಅಕ್ಕಿ ಗಂಜಿಯೊಳಗೆ ಬಿದ್ದಿದ್ದು. ಶಿಕ್ಷಕಿಯರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿ ದೀಕ್ಷಾ

ಬಳ್ಳಾರಿ: ಅಂಗನವಾಡಿ ಅಡುಗೆ ಕೇಂದ್ರದಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕಿ ಆಯ ತಪ್ಪಿ ಬಿಸಿ ಅನ್ನದ ಗಂಜಿಗೆ ಬಿದ್ದಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಬಾಲಕಿ ದೀಕ್ಷಾ

ಇಲ್ಲಿನ ಹೊಸಪೇಟೆ ನಗರದ ಚಿತ್ತವಾಡಗಿ ಸಂತೆಬೈಲು ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಬಿಸಿ ಗಂಜಿಯಾಗಿದ್ದರಿಂದ ದೀಕ್ಷಾ(3) ಎಂಬ ಬಾಲಕಿಗೆ ಬೆನ್ನು ಹಾಗೂ ಎಡಗೈ ಸುಟ್ಟಿದೆ.

ತಕ್ಷಣ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಭಾರಿ ಸಿಡಿಪಿಒ ಸುದೀಪ್​​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿ ಶಿಕ್ಷಕಿ ಅನಿತಾ ಹಾಗೂ ಸಹಾಯಕಿ ಕಮಲಮ್ಮ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಿವ್ಯಾ ಪೋಷಕರು ಆರೋಪಿಸಿದ್ದಾರೆ.

ABOUT THE AUTHOR

...view details