ಕರ್ನಾಟಕ

karnataka

By

Published : Jan 12, 2020, 11:10 AM IST

ETV Bharat / state

ಮಕ್ಕಳನ್ನು ಆ 5 'ಸಿ'ಗಳಿಂದ ದೂರವಿಡಿ ಅಂತಾರೆ ಡಾ.ಹುಲಿಕಲ್ ನಟರಾಜ್.. ಏನವು?

ಕಲೆಯನ್ನು ಉಳಿಸಿಕೊಳ್ಳಬೇಕೆಂದರೆ ವಿಜ್ಞಾನ ಬೇಕು. ಮನಸ್ಸು ಮತ್ತು ಬುದ್ಧಿಗಟ್ಟಿತನವಾಗಬೇಕಾದ್ರೇ ವಿಜ್ಞಾನ, ನಂಬಿಕೆ, ಧರ್ಮ, ಸಂಸ್ಕೃತಿ ಬೇಕು. ಧರ್ಮವನ್ನು ಮೂಢನಂಬಿಕೆಯಾಗಿ ಪರಿರ್ವನೆ ಮಾಡುವ ಜನರು ಹೇಗೆಲ್ಲ ಮೋಸ ಮಾಡುತ್ತಾರೆ ಎನ್ನುವುದನ್ನು ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಡಾ. ಹುಲಿಕಲ್‌ ನಟರಾಜ್‌ ಜಾಗೃತಿ ಮೂಡಿಸಿದರು.

Hulikal Nataraj
ರಾಜ್ಯ ವಿಜ್ಞಾನ ಪರಿಷತ್ತು ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್

ಬಳ್ಳಾರಿ: ಜೀವನದಲ್ಲಿ ಮಕ್ಕಳನ್ನು ಐದು 'ಸಿ'ಗಳಾದ ಸೆಲ್‌ಫೋನ್,ಚಾಟಿಂಗ್, ಕೇಬಲ್ ಕಿತ್ತು ಹಾಕಿ, ಕೆಟ್ಟ ಸಿನಿಮಾಗಳು ಮತ್ತು ಕ್ರಿಕೆಟ್​ನಿಂದ ದೂರವಿಡಿ ಎಂದು ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅವರು ಪೋಷಕರಿಗೆ ಕಿವಿ ಮಾತು ಹೇಳಿದ್ರು.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಉತ್ಸವ 2020ರ 2ನೇ ದಿನದ ಕಾರ್ಯಕ್ರಮದಲ್ಲಿ ಕಡಲೆ ಕಾಳುಗಣಪ ವೇದಿಕೆಯಲ್ಲಿ ಡಾ.ಹುಲಿಕಲ್ ನಟರಾಜ್ ಅವರು ಪವಾಡ ಬಯಲು ಮಾಡಿದರು.ಉದಾಹರಣೆಯೊಂದಿಗೆ ಪ್ರವಾಸಿಗರಿಗೆ ವೈಜ್ಞಾನಿಕತೆ ಬೆಳೆಸುವ ಕೆಲಸ ಮಾಡಿದರು. ಪವಾಡಗಳ ಹಿಂದೆ ವೈಜ್ಞಾನಿಕ ಅಂಶಗಳು ಒಳಗೊಂಡಿದೆ ಎಂದು ಪ್ರವಾಸಿಗರಿಗೆ ಮನದಟ್ಟು ಮಾಡಿದರು.

ಕಲೆಯನ್ನು ಉಳಿಸಿಕೊಳ್ಳಬೇಕೆಂದರೆ ವಿಜ್ಞಾನ ಬೇಕು. ಮನಸ್ಸು ಮತ್ತು ಬುದ್ಧಿಗಟ್ಟಿತನವಾಗಬೇಕಾದ್ರೇ ವಿಜ್ಞಾನ, ನಂಬಿಕೆ, ಧರ್ಮ, ಸಂಸ್ಕೃತಿ ಬೇಕು ಎಂದರು. ಧರ್ಮವನ್ನು ಮೂಢನಂಬಿಕೆಯಾಗಿ ಪರಿರ್ವನೆ ಮಾಡುವ ಜನರು ಹೇಗೆಲ್ಲ ಮೋಸ ಮಾಡುತ್ತಾರೆ ಎನ್ನುವುದನ್ನು ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ತಿಳಿ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್..

ತೆಂಗಿನ ಕಾಯಿಯಿಂದ ಭೂಮಿಯಲ್ಲಿ ನೀರು ಬರುತ್ತದೆ. ಗಾಜುಗಳಲ್ಲಿ ಕುಣಿಯುವುದರಿಂದ ಕಾಲಿಗೆ ಗಾಜು ಚುಚ್ಚುವುದಿಲ್ಲ. ನಿಂಬೆ ಹಣ್ಣು ‌ನೀರಿನಲ್ಲಿ ಕರಗುವುದು ಇನ್ನಿತರ ಪವಾಡಗಳನ್ನು ಪ್ರವಾಸಿಗರ ಮುಂದೆ ವೇದಿಕೆಯ ಮೇಲೆ ಮಾಡಿ ತೋರಿಸಿ, ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನೂ ಹೇಳಿದರು.

ಮಕ್ಕಳು ಐದು 'ಸಿ' ನಿಂದ ದೂರವಿರಬೇಕು:

1.ಸೆಲ್‌ಫೋನ್‌ನ್​​ನಿಂದ ದೂರವಿರಬೇಕು
2. ಚಾಟಿಂಗ್ ಮಾಡುವುದನ್ನು ಬಿಡಿಸಿ
3. ಕೇಬಲ್ ಕಿತ್ತು ಹಾಕಿ
4. ಕೆಟ್ಟ ಸಿನಿಮಾಗಳಿಂದ ದೂರವಿರಿ‌
5.ಕ್ರಿಕೆಟ್ ನೋಡಬೇಡಿ

ಕಬ್ಬಡಿ, ವಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಖೋಖೋ ಆಡಿಸಿ ಎಂದು ಪೋಷಕರಲ್ಲಿ ‌ಮನವಿ ಮಾಡಿಕೊಂಡರು‌.

ಮಕ್ಕಳಿಗೆ ಐದು 'ಐ' ಗಳನ್ನು ಕಲಿಸಬೇಕು:

1. ತನಿಖೆ ಮಾಡುವುದು
2. ಭಾಗವಹಿಸುವುದು
3. ತನಿಖಾ ವರದಿ ಮಾಡುವುದು
4. ಮಾಹಿತಿ ಸಂಗ್ರಹಣ
5. ಇನೋವೇಟಿವ್‌ ಮಕ್ಕಳಾಗಿರುತ್ತಾರೆ ಎಂದು ತಿಳಿಸಿದರು.

ಜನರಲ್ಲಿ ವೈಜ್ಞಾನಿಕ ಮನೋಭಾವನೆ ಬರಬೇಕು ಮತ್ತು ಯಾವುದೇ ಕಾರಣಕ್ಕೂ‌ ಮೋಸ ಹೋಗಬಾರದು ಎಂದು ಪ್ರವಾಸಿಗರಲ್ಲಿ ಮನವಿ ಮಾಡಿಕೊಂಡರು.

ABOUT THE AUTHOR

...view details