ಕರ್ನಾಟಕ

karnataka

By

Published : Oct 26, 2019, 10:37 AM IST

ETV Bharat / state

​​​​​​​ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ: 250 ವಿಕಲಚೇತನರಿಗೆ ತ್ರೈಸಿಕಲ್ ವಿತರಣೆ

ಬಳ್ಳಾರಿಯಲ್ಲಿ ವಿಕಲಚೇತನರ ಕಲ್ಯಾಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ ಹಾಗೂ ಟ್ರೈಸಿಕಲ್ ವಿತರಣೆ ನಡೆಯಿತು.

ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ

ಬಳ್ಳಾರಿ:ಅಪಘಾತದಲ್ಲಿ ಕಾಲು, ಕೈ ಕಳೆದುಕೊಂಡವರಿಗೆ ಮತ್ತು ವಿಶೇಷ ಚೇತನರು, ಬುದ್ಧಿಮಾಂದ್ಯರು ಹಾಗು ಅಂಧರಿಗೆ 250ಕ್ಕೂ ಅಧಿಕ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.

ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ

ಇಲ್ಲಿನ ವಿಮ್ಸ್ ಆಸ್ಪತ್ರೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆವರಣದಲ್ಲಿ ಕೊಲ್ಕತ್ತಾ ಕೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜೈ ಗುರುದೇವ ಚಾರಿಟೇಬಲ್ ಟ್ರಸ್ಟ್, ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರ
ಹಾಗೂ ತ್ರೈಸಿಕಲ್ ವಿತರಣೆ ನಡೆಯಿತು.

ಜಿಲ್ಲೆ, ತಾಲೂಕು, ಹೋಬಳಿ ಮತ್ತು ನೆರೆಹೊರೆಯ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಫಲಾನುಭವಿಗಳು ಪಾಲ್ಗೊಂಡಿದ್ದರು.

ABOUT THE AUTHOR

...view details