ಕರ್ನಾಟಕ

karnataka

ETV Bharat / state

ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿ

ಚಿರತೆ ದಾಳಿಯಿಂದಾಗಿ ನಾಲ್ಕು ಕುರಿಗಳು ಬಲಿಯಾಗಿದ್ದು, ಸಂಡೂರು ತಾಲೂಕಿನ ಜನರಲ್ಲಿ ಭಯದ ವಾತಾವರಣ ಮೂಡಿದೆ.

By

Published : Jun 4, 2019, 1:34 PM IST

ಚಿರತೆ ದಾಳಿ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಚಿರತೆಯೊಂದು ನಾಲ್ಕು ಕುರಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದ ನಿವಾಸಿ ಮಹೇಶ ಎಂಬುವರಿಗೆ ಈ ಕುರಿಗಳು ಸೇರಿವೆ. ಗ್ರಾಮ ಹೊರವಲಯದ ನಿರ್ಮಾಣ ಹಂತದ ಮನೆಯ ಕಟ್ಟಡ ಬಳಿಯ ಖಾಲಿ ನಿವೇಶನದಲ್ಲಿ ಈ ಕುರಿಗಳ ಹಿಂಡನ್ನು ಕೂಡಿ ಹಾಕಲಾಗಿತ್ತು.

ಏಕಾಏಕಿ ಕುರಿಗಳ ಮೇಲೆ ಎರಗಿದ ಚಿರತೆಯನ್ನು ಕಂಡ ಕುರಿಗಾಹಿ ಮತ್ತು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹೀಗೆ ಮೂರನೇ ಬಾರಿಗೆ ಚಿರತೆ ದಾಳಿ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ABOUT THE AUTHOR

...view details