ಬಳ್ಳಾರಿ:ಕೆರೆಯಲ್ಲಿ ಮೀನು ಹಿಡಿಯುವ ಹಕ್ಕು ಕೇವಲ ಮೀನುಗಾರರ ಸಂಘದ ಸದಸ್ಯರಿಗೆ ಮಾತ್ರ ಇರುತ್ತದೆ. ಆದ್ರೆ, ಸದಸ್ಯರಲ್ಲದವರಿಗೆ ಮೀನು ಹಿಡಿಯಲು ಅವಕಾಶ ನೀಡುತ್ತಿದ್ದು, ನಮಗೆ ಮೋಸ ಮಾಡಲಾಗುತ್ತಿದೆ ಎಂದು ಮೀನುಗಾರರ ಸಹಕಾರ ಸಂಘದ ತೆಕ್ಕಲಕೋಟೆಯ ಸದಸ್ಯರು ಆರೋಪಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಸಂಘದ ಸದಸ್ಯ ವಲಿಸಾಬ್, ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಮೀನುಗಾರರ ಸಹಕಾರ ಸಂಘ ನಿಯಮಿತದಲ್ಲಿ 25 ರಿಂದ 30 ವರ್ಷದದಿಂದ ಮೀನುಗಾರಿಕೆಯನ್ನು ಅವಲಂಬಿಸಿದ್ದೇವೆ. ಆದ್ರೆ ಸದಸ್ಯರಲ್ಲದವರಿಗೆ ಮೀನು ಹಿಡಿಯಲು ಅವಕಾಶ ನೀಡುತ್ತಿದ್ದು, ನಮಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮೌಲಾ ಸಾಬ್ ಎಂಬ ವ್ಯಕ್ತಿಯು ಸರ್ಕಾರದ ಅನುಮತಿ ಪಡೆದು, ಸಂಘದ ಷೇರು 515 ರೂಪಾಯಿ ತುಂಬಿ ಸದಸ್ಯತ್ವದ ಗುರುತಿನ ಚೀಟಿಯನ್ನು ಪಡೆದಿದ್ದು. ಅವರು ಸಿರಿಗೇರಿ ವ್ಯಾಪ್ತಿಯಲ್ಲಿ ಬರುವ ಮಾಳಾಪುರ ಮತ್ತು ಗುಂಡಿಗನೂರು ಕೆರೆಗಳಲ್ಲಿ 100 ಸದಸ್ಯರೊಂದಿಗೆ ಮೀನು ಹಿಡಿದು ಮಾರಾಟ ಮಾಡುತ್ತಿದ್ದರು. ಆದ್ರೆ ಸರ್ಕಾರದಿಂದ ಮೀನುಗಾರಾದ ನಮಗೆ ಯಾವ ಸೌಲಭ್ಯವೂ ದೊರೆತಿಲ್ಲ. ಅದರಲ್ಲಿ ಆಶ್ರಯ ಮನೆ, ಮೀನಿನ ಬಲೆ, ಬುಟ್ಟಿ ಸಹ ನೀಡಿಲ್ಲವೆಂದು ದೂರಿದರು.