ಬಳ್ಳಾರಿ:ತಾಲೂಕಿನ ಹೊಸ ಯರಗುಡಿ ಗ್ರಾಮ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದವರು ಆಂಧ್ರ ಪ್ರದೇಶದ ಕಣೇಕಲ್ನಲ್ಲಿ ಪತ್ತೆಯಾಗಿದ್ದಾರೆ.
ಬಳ್ಳಾರಿ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾದವರು ಆಂಧ್ರದಲ್ಲಿ ಪ್ರತ್ಯಕ್ಷ! - ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ
ಬಳ್ಳಾರಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಇಬ್ಬರು ಆಂಧ್ರ ಪ್ರದೇಶದ ಕಣೇಕಲ್ನಲ್ಲಿ ಪತ್ತೆಯಾಗಿದ್ದಾರೆ.
ಬಳ್ಳಾರಿ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾದವರು ಆಂಧ್ರದಲ್ಲಿ ಪ್ರತ್ಯಕ್ಷ..!
ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದ್ದ ಮದುವೆಗೆ ಬಂದಿದ್ದ ಆಂಧ್ರದ 11 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ನೆರೆಯ ಆಂಧ್ರದ ಕಣೇಕಲ್ ಮಂಡಲ ಯರ್ರಗುಂಟ್ಲ ಗ್ರಾಮದ ಇಬ್ಬರು ವಸತಿ ನಿಲಯದ ಶಾಲೆಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು.
ಸದ್ಯ ಇಬ್ಬರನ್ನು ಕಣೇಕಲ್ನ ಎಪಿ ಮಾಡೆಲ್ ಸ್ಕೂಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಮೋಕಾ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.