ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಯಜಮಾನ್ರೋತ್ಸವ... ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ - 10 ಸಾವಿರ ಸಸಿ ನೆಡುವ ಕಾರ್ಯಕ್ರಮ

ಬಳ್ಳಾರಿಯಲ್ಲಿ ಡಾ.ವಿಷ್ಣುವರ್ಧನ್​​ ಅವರ 10ನೇ ಪುಣ್ಯ ಸ್ಮರಣೆ ಪ್ರಯುಕ್ತ 10 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

10ನೇ ಪುಣ್ಯ ಸ್ಮರಣೆ
10ನೇ ಪುಣ್ಯ ಸ್ಮರಣೆ

By

Published : Dec 30, 2019, 8:59 AM IST

ಬಳ್ಳಾರಿ:ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದಿಂದ ನಗರದ ಸೆಂಟನರಿ ಸಭಾಂಗಣದಲ್ಲಿ ವಿಷ್ಣುವರ್ಧನ್​​ ಅವರ 10ನೇ ಪುಣ್ಯ ಸ್ಮರಣೆ ಪ್ರಯುಕ್ತ ಯಜಮಾನ್ರೋತ್ಸವ-2 ಹಾಗೂ 10 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗೇಂದ್ರ ಪ್ರಸಾದ್ ವಿಷ್ಣು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಸಿಎಂಗೆ ಮನವಿ ಮಾಡಲಾಗಿದೆ ಎಂದರು. ‌

ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ

ಕಸಾಪ ಜಿಲ್ಲಾದ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಬಳ್ಳಾರಿ ಬಿಸಿಲನಾಡನ್ನು ಹಸಿರುನಾಡನ್ನು ಮಾಡುವ ಕೆಲಸವನ್ನು ವಿಷ್ಣುವರ್ಧನ ಸೇನಾ ಸಮಿತಿ ಮಾಡುತ್ತಿದೆ. ದೇಶದಲ್ಲಿ ಒಬ್ಬ ಉತ್ತಮವಾದ ಚಿತ್ರನಟ ಡಾ.ವಿಷ್ಣುವರ್ಧನ್ ಅಗಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ‌

ABOUT THE AUTHOR

...view details