ಕರ್ನಾಟಕ

karnataka

ಟಚ್ ಫಾರ್ ಲೈಫ್ ಫೌಂಡೇಷನ್ ನಿಂದ  ಪೌರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ

ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿ ನೇತೃತ್ವದಲ್ಲಿ ಟಚ್ ಫಾರ್ ಲೈಫ್ ಫೌಂಡೇಷನ್ ನಿಂದ ಪೌರ ಕಾರ್ಮಿಕರಿಗೆ ದಿನಸಿ ಕಿಟ್​​ ವಿತರಿಸಲಾಯಿತು.

By

Published : Apr 29, 2020, 2:02 PM IST

Published : Apr 29, 2020, 2:02 PM IST

Touch for Life Foundation
ಪೌರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ

ಬಳ್ಳಾರಿ: ನಗರದ ರಾಘವೇಂದ್ರ ಎಂಟರ್ ಪ್ರೈಸಸ್ ನ ಕಚೇರಿಯ ಹೊರಾಂಗಣದಲ್ಲಿಂದು ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ ನೂರಾರು ಪೌರಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಲಾಯಿತು.

ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಂದಾಜು 600 ಕಾರ್ಮಿಕರಿಗೆ ರೇಷನ್ ಕಿಟ್ ಹಾಗೂ ಮಾಸ್ಕ್ ವಿತರಿಸಲಾಯಿತು.

ಪೌರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ

ರೇಷನ್​ ಕಿಟ್​​ ಪಡೆಯಲೆಂದು ವಿವಿದ ಕಡೆಯಿಂದ ಟ್ರ್ಯಾಕ್ಟರ್​ ಮೂಲಕ ಆಗಮಿಸಿದ್ದ ಕಾರ್ಮಿಕರು, ರೇಷನ್​ ಕಿಟ್​ ಪಡೆದುಕೊಳ್ಳುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾದರೂ, ರೇಷನ್​ ಕಿಟ್​ ದೊರೆತ ಬಳಿಕ ಮನೆಗೆ ತೆರಳುವ ಅವಸರದಲ್ಲಿ ಅಂತರದ ನಿಯಮ ಪಾಲಿಸುವಲ್ಲಿ ಎಡವಿದ್ದಾರೆ.

ABOUT THE AUTHOR

...view details