ಕರ್ನಾಟಕ

karnataka

By

Published : Mar 29, 2020, 12:06 AM IST

ETV Bharat / state

ಕಾಲ್ನಡಿಗೆ ಮೂಲಕ ಕೊರೊನಾ ಅರಿವು ಮೂಡಿಸಿದ ಉಪ ವಿಭಾಗ ದಂಡಾಧಿಕಾರಿ

ಪೊಲೀಸ್​ ಇಲಾಖೆ ವಿಶೇಷ ತಂಡದ ಜೊತೆಗೆ ಉಪ ವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಹಾಗೂ ಡಿವೈಎಸ್ಪಿ ವಿ. ರಘುಕುಮಾರ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.

deputy dc corona awareness program in  hospate
ಉಪ ವಿಭಾಗ ದಂಡಾಧಿಕಾರಿ

ಹೊಸಪೇಟೆ : ಪೊಲೀಸ್​ ಇಲಾಖೆ ವಿಶೇಷ ತಂಡದ ಜೊತೆಗೆ ಉಪ ವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಹಾಗೂ ಡಿವೈಎಸ್ಪಿ ವಿ. ರಘುಕುಮಾರ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.

ನಗರದ ಮೇನ್ ಬಜಾರ್, ವಾಲ್ಮೀಕಿ ವೃತ್ತ, ಡ್ಯಾಂ ರಸ್ತೆ, ವಿಜಯನಗರ ಕಾಲೇಜ್ ರಸ್ತೆ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದಲ್ಲಿ ಕಾಲ್ನಡಿಗೆಯಲ್ಲಿ ವೀಕ್ಷಣೆಯನ್ನು ಮಾಡಿದರು.

ಉಪ ವಿಭಾಗ ದಂಡಾಧಿಕಾರಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೆಕ್ಷನ್ 144 ಜಾರಿಯಲ್ಲಿದೆ ಯಾರು ತಿರುಗಾಡುವಂತಿಲ್ಲ. ನಿಮ್ಮ ನಿಮ್ಮ ಮನೆಯಲ್ಲಿ ಇರಬೇಕು. ತರಕಾರಿಗಳು ಹಾಲು ಆಸ್ಪತ್ರೆ ಹಾಗೂ ಔಷಧ ಅಂಗಡಿಗಳು ತೆಗೆದಿರುತ್ತವೆ‌. ಅವಶ್ಯಕತೆ ಇದ್ದವರು ಕುಟುಂಬದ ಯಾರಾದರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ತೆಗದುಕೊಂಡು ಬರಬಹುದು ಎಂದು ಎಂದರು.

ABOUT THE AUTHOR

...view details