ಕರ್ನಾಟಕ

karnataka

By

Published : Jun 26, 2022, 9:01 PM IST

ETV Bharat / state

ವ್ಯಕ್ತಿಯ ಅನುಮಾನಸ್ಪದ ಸಾವು: ಸಂಡೂರಲ್ಲಿ ದಲಿತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ರು!

ಕಳೆದ ವಾರದ ಹಿಂದೆ ಎಂ. ಗಂಗಲಾಪುರ ಗ್ರಾಮದ ಆಂಜನೇಯ ಎನ್ನುವ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಮಾಯಣ್ಣ ಎಂಬುವವರನ್ನು ಅರೆ ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.

ದಲಿತ ವ್ಯಕ್ತಿಗೆ ಕಂಬಕ್ಕೆ ಕಟ್ಟಿ ಹಲ್ಲೆ
ದಲಿತ ವ್ಯಕ್ತಿಗೆ ಕಂಬಕ್ಕೆ ಕಟ್ಟಿ ಹಲ್ಲೆ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನ‌ ಅನುಮಾನಾಸ್ಪದ ಸಾವಿನ ಹಿನ್ನೆಲೆ ದಲಿತ ವ್ಯಕ್ತಿಗೆ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಹೀಗಾಗಿ, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ಮಾಯಣ್ಣಾ ಅವರು ಮಾತನಾಡಿದರು

ಕಳೆದ ವಾರದ ಹಿಂದೆ ಎಂ. ಗಂಗಲಾಪುರ ಗ್ರಾಮದ ಅಂಜನೇಯ ಎನ್ನುವ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಮಾಯಣ್ಣ ಎಂಬುವರನ್ನು ಅರೆ ಬೆತ್ತಲೆಗೂಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ಥಳಿಸಿದ್ದಷ್ಟೇ ಅಲ್ಲದೇ ಮಾಯಣ್ಣ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪ್ರಕರಣ ಹಿನ್ನೆಲೆ ನೋಡುವುದಾದರೆ ಮೃತ ಆಂಜನೇಯ ಮತ್ತು ಮಾಯಣ್ಣ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗ್ತಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಅವರು ಮಾತನಾಡಿದರು

ಕಳೆದ ವಾರವೂ ಮನೆಯೊಂದಕ್ಕೆ ಕಲ್ಲು ತೂರಿದ ವಿಚಾರದಲ್ಲಿ‌ ಆಂಜನೇಯ ಮಾಯಣ್ಣ ಸೇರಿದಂತೆ ಗ್ರಾಮದ ಕೆಲವರ ಮಧ್ಯೆ ವಾಗ್ವಾದವಾಗಿತ್ತು. ಅದೇ ದಿನರಾತ್ರಿ ಆಂಜನೇಯ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ರು. ಇದಕ್ಕೆ ಮಾಯಣ್ಣ ಕಾರಣ ಅನ್ನೋದು ಕೆಲವರ ಆರೋಪ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಯಣ್ಣನನ್ನು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ. ಇದರಿಂದ 2 ಗುಂಪುಗಳಿಂದ ದೂರು, ಪ್ರತಿ ದೂರು ನೀಡಲಾಗಿದೆ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಆರ್​ಎಸ್​​ಎಸ್​ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್​ ಹೋಗ್ತಿದೆ: ಕುಮಾರಸ್ವಾಮಿ

ABOUT THE AUTHOR

...view details