ಕರ್ನಾಟಕ

karnataka

ETV Bharat / state

ಹೊಸಪೇಟೆ ಕೋರ್ಟ್​ ಆವರಣದಲ್ಲೇ ಹರಿಯಿತು ನೆತ್ತರು: ವಕೀಲನ ಬರ್ಬರ ಹತ್ಯೆ - Advocate murder in hosapete

Murder of Congress leader in court premises
ನ್ಯಾಯಾಲಯದ ಆವರಣದಲ್ಲಿ ಕಾಂಗ್ರೆಸ್​ ಮುಖಂಡನ ಕೊಲೆ

By

Published : Feb 27, 2021, 12:39 PM IST

Updated : Feb 27, 2021, 3:11 PM IST

12:34 February 27

ಬರ್ಬರ ಕೊಲೆ ಪ್ರಕರಣದಿಂದ ವಿಜಯನಗರ ಜಿಲ್ಲೆ ಬೆಚ್ಚಿಬಿದ್ದಿದೆ. ಹೊಸಪೇಟೆ ಕೋರ್ಟ್ ಆವರಣಲ್ಲೇ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್​ ಮುಖಂಡರೂ ಆಗಿದ್ದ ವಕೀಲರೊಬ್ಬರ ಬರ್ಬರ ಕೊಲೆಯಾಗಿದೆ.

ನ್ಯಾಯಾಲಯದ ಆವರಣದಲ್ಲಿ ಕಾಂಗ್ರೆಸ್​ ಮುಖಂಡನ ಕೊಲೆ

ಹೊಸಪೇಟೆ:ಹಾಡಹಗಲೇ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನೆತ್ತರು ಹರಿದಿದೆ. ವಕೀಲನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣದಿಂದ ನೂತನ ವಿಜಯನಗರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ.

ನಗರದ ಕೋರ್ಟ್ ಆವರಣಲ್ಲಿ ಕಾಂಗ್ರೆಸ್​ ಮುಖಂಡ ಮತ್ತು ವಕೀಲರಾಗಿದ್ದ ತಾರಿಹಳ್ಳಿ ವೆಂಕಟೇಶ (48) ಅವರನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿವೋರ್ವ ಹತ್ಯೆಗೈಯ್ದಿದ್ದಾನೆ.

ವಕೀಲ ತಾರಿಹಳ್ಳಿ ವೆಂಕಟೇಶ ಅವರ ತೆಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೌಟುಂಬಿಕ ಕಲಹದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: 15 ದಿನದ ಹಿಂದಷ್ಟೇ 2ನೇ ಮದುವೆ: ಮೊದಲ ಪತ್ನಿ ಸಾವಿನಿಂದ ನೊಂದಿದ್ದ ವ್ಯಕ್ತಿ ಮಗುವಿನೊಂದಿಗೆ ಆತ್ಮಹತ್ಯೆ

ಕೊಲೆ ಮಾಡಿದ ಆರೋಪಿ ಮನೋಜನು ವೆಂಕಟೇಶ ಅವರ ಸಂಬಂಧಿಕನಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  

ವಕೀಲರನ್ನು ಕೊಲೆ ಮಾಡಿದ್ದಕ್ಕೆ ಕಾರಣ ಕೇಳಿದ್ದಕ್ಕೆ, ನಾಲ್ಕು ಬಾರಿ ನನ್ನನ್ನು ಕೆಲಸದಿಂದ ಬಿಡಿಸಿದ್ದಾನೆ. ಹೊಟ್ಟೆಗೆ ಏನು ಮಾಡಬೇಕು ಎಂದು ಮನೋಜ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ತಾರಿಹಳ್ಳಿ ವೆಂಕಟೇಶ ನಿನಗೆ ಏನಾಗ ಬೇಕು ಎಂಬ ಪ್ರಶ್ನೆಗೆ ದೊಡ್ಡಪ್ಪ ಎಂದು ಹೇಳಿದ್ದಾನೆ. 

Last Updated : Feb 27, 2021, 3:11 PM IST

For All Latest Updates

TAGGED:

ABOUT THE AUTHOR

...view details