ಕರ್ನಾಟಕ

karnataka

ETV Bharat / state

ದಸಾರ ಕ್ರೀಡಾಕೂಟ.. ಆಯೋಜನಕರು, ಕ್ರೀಡಾಪಟುಗಳ ಮಧ್ಯೆ ಮಾತಿನ ಚಕಮಕಿ.. - ದಸಾರ ಕ್ರೀಡಾಕೂಟ

ಬಳ್ಳಾರಿಯಲ್ಲಿ ನಡೆದ ದಸಾರ ಕ್ರೀಡಾಕೂಟದಲ್ಲಿ ಟಿಎ, ಡಿಎ ವಿಚಾರವಾಗಿ ಕ್ರೀಡಾಪಟುಗಳ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕ ನಡುವೆ ಬೇಸರಕ್ಕೆ ಕಾರಣವಾಗಿದೆ.

ಬಳ್ಳಾರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ದಸರಾ ಕ್ರೀಡಾಕೂಟ

By

Published : Sep 22, 2019, 10:33 PM IST

ಬಳ್ಳಾರಿ: ನೇರವಾಗಿ ಟಿಎ, ಡಿಎ ಹಣವನ್ನು ಕೊಡಿ ಎಂಬುದು ಕ್ರೀಡಾಪಟುಗಳ ಬೇಡಿಕೆಗೆ ಕಿವಿಗೊಡದೆ ನಿಮ್ಮ ಬ್ಯಾಂಕ್​ ಖಾತೆಗೆ ಜಮಾ ಮಾಡುತ್ತೇವೆ ಎಂದು ಕ್ರೀಡಾ ಇಲಾಖೆಯ ನಿರ್ದೇಶಕ ಹರಿಸಿಂಗ್ ರಾಥೋಡ ಅವರ ನಿರ್ಧಾರದಿಂದ ಇಬ್ಬರ ನಡುವೆಯು ಮಾತಿನ ಚಕಮಕಿ ಏರ್ಪಟ್ಟಿತು.

ಬಳ್ಳಾರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ದಸರಾ ಕ್ರೀಡಾಕೂಟ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ದಸಾರ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದ್ದು, ಕ್ರೀಡಾಸಕ್ತರಲ್ಲಿ ಬೇಸರ ಮೂಡಿಸಿದೆ.ಗ್ರಾಮೀಣ ಸೊಗಡು ಬಿಂಬಿಸುವ ಖೋ ಖೋ, ಕಬಡ್ಡಿ ನೋಡಲು ಬಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಸಿದರು. ಕ್ರೀಡಾಕೂಟದ ಕ್ರೀಡಾಪಟುಗಳಿಗೆ ಟಿಎ, ಡಿಎ ಹಣವನ್ನು ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸುವುದು ತಡವಾಗುತ್ತದೆ. ತರಬೇತುದಾರರು ಹಣ ಖರ್ಚು ಮಾಡಿ, ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಬಂದಿರುತ್ತಾರೆ. ಹಾಗಾಗಿ ನೇರವಾಗಿ ಕೊಡಿ ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಹರಿಸಿಂಗ್ ರಾಥೋಡ್​ ಅವರಿಗೆ ವಿನಂತಿಸಿದರು.ಇದರಿಂದ ಬರೋಬ್ಬರಿ 2 ಗಂಟೆಗಳ ಕಾಲ ಕ್ರೀಡೆಗಳು ಪ್ರಾರಂಭವಾದವು.

ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಕ್ರಿಯಾ ಯೋಜನೆ ಮತ್ತು ಸಂಘಟನೆಯಿಂದ ದಸರಾ ಕ್ರೀಡಾಕೂಟಕ್ಕೆ ತಾಲೂಕು, ಜಿಲ್ಲಾ ಮತ್ತು ವಿಭಾಗಮಟ್ಟ, ರಾಜ್ಯಮಟ್ಟದಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ₹ 13 ಲಕ್ಷ ಹಣ ಮಂಜೂರು ಮಾಡಲು ಮನವಿ ಸಲ್ಲಿದ್ದೇವೆ ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾದ ಹರಿಸಿಂಗ್ ರಾಥೋಡ ತಿಳಿಸಿದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು:

1500 ಮೀಟರ್ ಓಟದ ಪುರುಷರ ವಿಭಾಗದಲ್ಲಿ ಪ್ರಥಮ ರಾಜಿದ್, ದ್ವೀತಿಯ ಕೆ.ಜಾವಿದ್, ತೃತೀಯ ಅಕ್ಕಿ ಮಲ್ಲಿಕಾರ್ಜುನ. ಮಹಿಳೆಯರಲ್ಲಿ ಪ್ರಥಮ ಎಸ್.ಕಾವ್ಯ, ದ್ವಿತೀಯ ಎಸ್. ರೇಖಾ ಹರಪನಹಳ್ಳಿ ಪಡೆದುಕೊಂಡರು.ಪುರುಷರ 100 ಮೀಟರ್ ಓಟದಲ್ಲಿ ಪ್ರಥಮ ದೇವಿಪ್ರಸಾದ್, ದ್ವೀತಿಯ ಕಿರಣ್, ತೃತೀಯ ಪ್ರಜ್ವಾಲ್ ಹಾಗೂ 400 ಮೀಟರ್ ಪುರುಷರ ವಿಭಾಗದಲ್ಲಿ ಪ್ರಥಮ ಗಗನ ದೀಪ್ , ದ್ವಿತೀಯ ಮಂಜುನಾಥ, ತೃತೀಯ ಮುಬಾರಕ್ ಹಾಗೂ 400 ಮೀಟರ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಕಾವ್ಯ, ದ್ವಿತೀಯ ಸುಕನ್ಯಾ , ತೃತೀಯ ನಂದಿನಿ ಪ್ರಶಸ್ತಿ ಪಡೆದುಕೊಂಡರು.ಮಹಿಳೆಯರ ವಿಭಾಗದ 100 ಮೀಟರ್ ಓಟದಲ್ಲಿ ಬಳ್ಳಾರಿ ಸುದಿಕ್ಷ, ದ್ವಿತೀಯ ಹೊಸಪೇಟೆಯ ಸುಕನ್ಯ, ತೃತೀಯ ಸ್ಥಾನ ಕೆ.ವಿದ್ಯಾ ಪಡೆದುಕೊಂಡಿದರು. ಕಬಡ್ಡಿ, ಖೋ ಖೋ, ವಾಲಿಬಾಲ್, ಥ್ರೋ ಬಾಲ್, ಪುಟ್ಬಾಲ್, ಹಾಕಿ ಇನ್ನಿತರ ಕ್ರೀಡೆಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುರೇಶ್ ಬಾಬು, ಗಾದೆಪ್ಪ ಮತ್ತು ಜಿಲ್ಲೆಯ ವಿವಿಧ ತಾಲೂಕಿನಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.

ABOUT THE AUTHOR

...view details