ಕರ್ನಾಟಕ

karnataka

By

Published : May 30, 2021, 4:51 PM IST

ETV Bharat / state

ಕೋವಿಡ್ ಸೆಂಟರ್​ನಲ್ಲಿ ಸಂಗೀತ ಕಾರ್ಯಕ್ರಮ: ಕುಣಿದು ಕುಪ್ಪಳಿಸಿದ ಸೋಂಕಿತರು

ಕೊರೊನಾ ಪೀಡಿತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ವಿಜಯನಗರ ಜಿಲ್ಲೆಯ ಮಿರಾಕೂರನಹಳ್ಳಿ ಕೋವಿಡ್ ಸೆಂಟರ್​ನಲ್ಲಿ ಸುರಭಿ ಮೆಲೋಡಿಸ್ ಹಡಗಲಿಯ ಸಿದ್ದು ಕಲಾ ಬಳಗದಿಂದ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಿತು.

Concert at the covid Center
ಕೋವಿಡ್ ಸೆಂಟರ್​ನಲ್ಲಿ ಸಂಗೀತ ಕಾರ್ಯಕ್ರಮ

ಹೊಸಪೇಟೆ (ವಿಜಯನಗರ): ಜಿಲ್ಲೆಯ ಮಿರಾಕೂರನಹಳ್ಳಿ ಕೋವಿಡ್ ಸೆಂಟರ್​ನಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಿತು.

ಕೋವಿಡ್ ಸೆಂಟರ್​ನಲ್ಲಿ ಸಂಗೀತ ಕಾರ್ಯಕ್ರಮ

ಸುರಭಿ ಮೆಲೋಡಿಸ್ ಹಡಗಲಿಯ ಸಿದ್ದು ಕಲಾ ಬಳಗದಿಂದ ತತ್ವಪದ, ಜಾನಪದ ಗೀತಗಾಯನ ನಡೆಯಿತು‌. ಪುರಾಣ ಪುಣ್ಯಕಥೆಗಳ ದೃಷ್ಟಾಂತ, ಭಗವಂತನ ಧ್ಯಾನದಿಂದಾಗುವ ಒಳಿತು ಸೇರಿದಂತೆ ಒಂದಷ್ಟು ಹಾಸ್ಯ ಕಾರ್ಯಕ್ರಮ ನಡೆಸಲಾಯ್ತು.

ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕಿತರು ಸಂಗೀತ ಕಾರ್ಯಕ್ರಮದಿಂದ ತಮ್ಮ ನೋವನ್ನೆಲ್ಲ ಮರೆತು ಕುಣಿದು ಕುಪ್ಪಳಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಗೆ 2023ರವರೆಗೂ ಕಾಯಬೇಕು : ಸತೀಶ್ ಜಾರಕಿಹೊಳಿ‌

ABOUT THE AUTHOR

...view details