ಹೊಸಪೇಟೆ (ವಿಜಯನಗರ): ಜಿಲ್ಲೆಯ ಮಿರಾಕೂರನಹಳ್ಳಿ ಕೋವಿಡ್ ಸೆಂಟರ್ನಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಿತು.
ಸುರಭಿ ಮೆಲೋಡಿಸ್ ಹಡಗಲಿಯ ಸಿದ್ದು ಕಲಾ ಬಳಗದಿಂದ ತತ್ವಪದ, ಜಾನಪದ ಗೀತಗಾಯನ ನಡೆಯಿತು. ಪುರಾಣ ಪುಣ್ಯಕಥೆಗಳ ದೃಷ್ಟಾಂತ, ಭಗವಂತನ ಧ್ಯಾನದಿಂದಾಗುವ ಒಳಿತು ಸೇರಿದಂತೆ ಒಂದಷ್ಟು ಹಾಸ್ಯ ಕಾರ್ಯಕ್ರಮ ನಡೆಸಲಾಯ್ತು.