ಕರ್ನಾಟಕ

karnataka

By

Published : Jun 9, 2022, 10:24 PM IST

ETV Bharat / state

ನೌಕರಿ ನೀಡುವುದಾಗಿ ರೈತರಿಂದ ಜಮೀನು ಪಡೆದು ಕಂಪನಿ: 13 ವರ್ಷವಾದ್ರೂ ತಲೆ ಎತ್ತದ ಕಾರ್ಖಾನೆ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ, ನಾರಾಯಣದೇವರ ಕೆರೆ ಗ್ರಾಮದಲ್ಲಿ ಕೈಗಾರಿಕೆ ಸ್ಥಾಪನೆಗೆ ರುಕ್ಮಿಣಿ ರಾಮಾ ಕಾರ್ಖಾನೆಯವರು ರೈತರಿಂದ 90ಕ್ಕೂ ಹೆಚ್ಚು ಎಕರೆ ಜಮೀನನ್ನು ಕನಿಷ್ಟ ಬೆಲೆಗೆ ಖರೀದಿಸಿದ್ದರು. ಆದ್ರೆ ಇದೀಗ 13 ವರ್ಷವಾದ್ರೂ ಕಾರ್ಖಾನೆ ಮಾತ್ರ ನಿರ್ಮಾಣವಾಗಿಲ್ಲ. ಹೀಗಾಗಿ ರೈತರು ಜಮೀನು ವಾಪಸ್ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಜಮೀನು ವಾಪಸ್​ ಕೊಡಬೇಕೆಂದು ಆಗ್ರಹಿಸಿ ರೈತರ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ರೈತರಿಂದ ಪ್ರತಿಭಟನೆ

ವಿಜಯನಗರ:ಕಂಪನಿಯೊಂದು ಗ್ರಾಮದ ಅಭಿವೃದ್ದಿ, ಯುವಕರಿಗೆ ನೌಕರಿ, ಮಾರುಕಟ್ಟೆಗಿಂತ ಮೂರು ಪಟ್ಟು ಹಣ ನೀಡುವುದಾಗಿ ಹೇಳಿ ಅನ್ನದಾತನಿಂದ ಜಮೀನು ಕಿತ್ತುಕೊಂಡಿತ್ತು. ಇದೀಗ 13 ವರ್ಷ ಕಳೆದರೂ ಕಾರ್ಖಾನೆ ಸ್ಥಾಪಿಸಲು ಆ ಕಂಪನಿ ಮುಂದಾಗಿಲ್ಲ. ಆದ್ರೆ ಬೇರೆ ಉದ್ದೇಶಕ್ಕೆ ಜಮೀನು ಬಳಕೆ ಮಾಡಲು ಯೋಚಿಸಿದ್ದು, ಕಂಪನಿ ವಿರುದ್ಧ ಅನ್ನದಾತರು ಹೋರಾಟಕ್ಕೆ ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ, ನಾರಾಯಣದೇವರ ಕೆರೆ ಗ್ರಾಮದಲ್ಲಿ ಕೈಗಾರಿಕೆ ಸ್ಥಾಪನೆಗೆ ರುಕ್ಮಿಣಿ ರಾಮಾ ಕಾರ್ಖಾನೆಯವರು ರೈತರಿಂದ 90ಕ್ಕೂ ಹೆಚ್ಚು ಎಕರೆ ಜಮೀನನ್ನು ಕನಿಷ್ಠ ಬೆಲೆಗೆ ಖರೀದಿಸಿದ್ದರು. ಜಮೀನು ನೀಡಿದವರಿಗೆ ನೌಕರಿ ಮತ್ತು ಗ್ರಾಮಗಳನ್ನ ಅಭಿವೃದ್ದಿ ಮಾಡುವ ಭರವಸೆ ನೀಡಿದ್ದರು. ಆದ್ರೆ 13 ವರ್ಷ ಕಳೆದರೂ ಇದುವರೆಗೆ ಸ್ಪಾಂಜ್ ಐರನ್ ಫ್ಯಾಕ್ಟರಿ ನಿರ್ಮಾಣ ಮಾಡದೆ, ಮತ್ತೊಂದು ಯೋಜನೆಗೆ ಮುಂದಾಗಿರುವುದು ಜಮೀನು ಕಳೆದುಕೊಂಡ ರೈತರ ಆಕ್ರೋಶಕ್ಕೆ ಕಾರಣವಾಗಿದೆ.


ಇದೀಗ ಜಮೀನು ಕಳೆದುಕೊಂಡ ರೈತರು ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ. ರೈತರಿಂದ ಪಡೆದ ಜಮೀನು ಪುನಃ ರೈತರಿಗೆ ವಾಪಸ್ ಕೊಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ನೇತೃತ್ವದಲ್ಲಿ ರೈತರು ತಹಶೀಲ್ದಾರ್ ಕಚೇರಿ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಹ ಪ್ರತಿಭಟನೆ ನಡೆಸಿ, ಬಳಿಕ ಡಿಸಿ ಅನಿರುದ್ಧ ಶ್ರವಣ್ ಪಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ:ಮೇಕೆಗೆ ಕಚ್ಚಿದ ನಾಯಿಗಳ ಕೊಲೆಗೆ ಸುಪಾರಿ: ಡಬಲ್ ಬ್ಯಾರೆಲ್ ಗನ್‌ನಿಂದ ಗುಂಡು ಹಾರಿಸಿ ಹತ್ಯೆ!

ABOUT THE AUTHOR

...view details