ಕರ್ನಾಟಕ

karnataka

ETV Bharat / state

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿತರಿಗೆ ಬೆಡ್ರ್ಗಳ ಕೊರತೆ ಆಗಬಾರದೆಂಬ ಉದ್ದೇಶವನ್ನಿಟ್ಟು ಕೊಂಡು ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್‌ (ಜೆಐಟಿಓ) ಮತ್ತು ಸೇವಾ ಭಾರತಿ ಸಹ ಯೋಗದಲ್ಲಿ ಈ ಕೇರ್ ಐಸೋಲೇಷನ್ ಕೇಂದ್ರವನ್ನ ಪ್ರಾರಂಭಿಸಲಾಗಿದೆ.

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

By

Published : May 4, 2021, 12:21 PM IST

ಬಳ್ಳಾರಿ: ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿನ ಅತಿಥಿ ಗೃಹದಲ್ಲಿ 50 ಬೆಡ್​​ಗಳ ಸೌಲಭ್ಯವುಳ್ಳ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರವನ್ನ ಆರಂಭಿಸಲಾಗಿದೆ.

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ಮಾತನಾಡಿ, ಹೋಮ್ ಐಸೋಲೇಷನ್​​ನಲ್ಲಿರುವವರನ್ನ ಈ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಉಚಿತವಾಗಿ ಕೋವಿಡ್ ಕೇರ್ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ ಎಂದರು.

ವೈದ್ಯ ಡಾ. ವಿಜಯ ಭಾಸ್ಕರ್​ ರೆಡ್ಡಿ ಮಾತನಾಡಿ, ಹೋಮ್ ಐಸೋಲೇಷನ್​ನಲ್ಲಿರುವವರಿಗೆ ಅವರ ಮನೆಯಲ್ಲಿ ಕೊಠಡಿಗಳ ಕೊರತೆ ಇದ್ದರೆ, ಅವರು ಇಲ್ಲಿ ಬಂದು ಇರಬಹುದು. ತುರ್ತು ಸಮಯದಲ್ಲಿ ಮಾತ್ರ ವೈದ್ಯರ ಸೌಲಭ್ಯವನ್ನ ಕಲ್ಪಿಸಲಾಗುತ್ತೆ. ವಿಶ್ವವಿದ್ಯಾಲಯದ ಈ‌ ಕೇರ್ ಐಸೋಲೇಷನ್​​ನಲ್ಲಿರುವವರಿಗೆ ಯೋಗ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ಓದಲು ಪುಸ್ತಕ ಹಾಗೂ ಧನಾತ್ಮಕ ಚಿಂತನೆಗಳನ್ನ ಬೆಳೆಸುವ ವಿಡಿಯೋಗಳನ್ನ ತೋರಿಸಿ, ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲಾಗುವುದು ಎಂದರು.

ಇದನ್ನೂ ಓದಿ : ಆಕ್ಸಿಜನ್​ ಕೊರತೆ: ಅಫಜಲಪುರ ತಾಲೂಕು ಆಸ್ಪತ್ರೆಯಲ್ಲೂ ನಾಲ್ವರು ರೋಗಿಗಳು ಸಾವು!

ABOUT THE AUTHOR

...view details