ಕರ್ನಾಟಕ

karnataka

ETV Bharat / state

ಕೊರೊನಾ: ಗುಣಮುಖರಾಗಿ ಬಂದ ಜಿಂದಾಲ್ ನೌಕರರ ಸ್ವಾಗತಿಸಿದ ಸಹೋದ್ಯೋಗಿಗಳು - Jindal employees cured from Corona

ಜಿಂದಾಲ್ ನೌಕರರು ಕೊರೊನಾ ವೈರಸ್​ನಿಂದ ಗುಣಮುಖರಾಗಿ ಜಿಂದಾಲ್​ನಲ್ಲಿ‌ರುವ ನಿವಾಸಕ್ಕೆ ಬರುವ ಸಮಯದಲ್ಲಿ ಸಹೋದ್ಯೋಗಿಗಳು ಹೂ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು.

Colleagues welcomed Jindal employees
ಜಿಂದಾಲ್ ನೌಕರರಿಗೆ ಸ್ವಾಗತಿಸಿದ ಸಹೋದ್ಯೋಗಿಗಳು

By

Published : Jun 18, 2020, 8:47 AM IST

ಬಳ್ಳಾರಿ: ಜಿಂದಾಲ್ ನೌಕರರು ಕೊರೊನಾ ವೈರಸ್​ನಿಂದ ಗುಣಮುಖರಾಗಿ ಜಿಂದಾಲ್​ಗೆ ವಾಪಸ್​ ಆದಾಗ ಅವರ ಸಹೋದ್ಯೋಗಿಗಳು ಅವರಿಗೆ ಪುಷ್ಪಗಳನ್ನ ಹಾಕಿ ಮತ್ತು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು.

ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ನೌಕರರು ಕೊರೊನಾ ವೈರಸ್​ನಿಂದ ಗುಣಮುಖರಾಗಿ ಜಿಂದಾಲ್​ನಲ್ಲಿ‌ರುವ ನಿವಾಸಕ್ಕೆ ಬರುವ ಸಮಯದಲ್ಲಿ ಕಂಪನಿ ನೌಕರರ ಸಹೋದ್ಯೋಗಿಗಳು ಅವರಿಗೆ ಹೂವುಗಳನ್ನ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು.

ಕೊರೊನಾದಿಂದ ಗುಣಮುಖರಾಗಿ ಬಂದ ಜಿಂದಾಲ್ ನೌಕರರಿಗೆ ಸಹೋದ್ಯೋಗಿಗಳು ಸ್ವಾಗತ ಕೋರಿದರು.

ಇನ್ನು ಕೊರೊನಾದಿಂದ ಗುಣಮುಖರಾಗಿ 37 ಜನರು ಬಿಡುಗಡೆಯಾಗಿದ್ದು, ಇದರಲ್ಲಿ ‌ಬಹುತೇಕರು ಜಿಂದಾಲ್​ನವರಾಗಿದ್ದಾರೆ. ಇದರಲ್ಲಿ ಜಿಂದಾಲ್ ಸುತ್ತಮುತ್ತಲಿನ ಎಸ್.ಹೆಚ್ ಟೌನ್​ಶಿಪ್​ 5, ತೋರಣಗಲ್ಲು 2, ವಿವಿ ನಗರ 2, ವಿದ್ಯಾನಗರ 9, ಹೆಚ್.ಎಸ್.ಟಿ 3, ತಾಳೂರು 2, ವಡ್ಡು 2ರ ಜನರಿದ್ದರು.‌

ಇನ್ನು 319 ಪಾಸಿಟಿವ್ ಕೇಸ್​ಗಳಲ್ಲಿ ಇದುವರೆಗೂ 92 ಜನ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನೆಲ್ಲ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಮಾಹಿತಿ ತಿಳಿಸಿದರು.

ABOUT THE AUTHOR

...view details