ಕರ್ನಾಟಕ

karnataka

ಬಳ್ಳಾರಿ: ಟ್ರಾಮಾಕೇರ್ ಸೆಂಟರ್​ಗೆ ಸಿಎಂ ಬಿಎಸ್​ವೈ ಚಾಲನೆ

By

Published : Aug 31, 2020, 3:38 PM IST

ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಕೇಂದ್ರ - ರಾಜ್ಯ ಸರ್ಕಾರದ ಸಹಯೋಗದಲ್ಲಿ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್​ಗೆ ಇಂದು ಚಾಲನೆ ನೀಡಲಾಯಿತು.

CM BSY
ಟ್ರಾಮಾಕೇರ್ ಸೆಂಟರ್

ಬಳ್ಳಾರಿ: ನಗರದ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಕೇಂದ್ರ - ರಾಜ್ಯ ಸರ್ಕಾರದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್​ಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸಚಿವ ಡಾ.ಅಶ್ವಿನಿ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರು ಇ- ಲೋಕಾರ್ಪಣೆ ಮೂಲಕ ಟ್ರಾಮಾಕೇರ್ ಸೆಂಟರ್​ಗೆ ಚಾಲನೆ ನೀಡಿದರು.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು, ಬಳ್ಳಾರಿಯ ಟ್ರಾಮಾಕೇರ್ ಸೆಂಟರ್ ಅನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ, ವಿಡಿಯೊ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಶಾಸಕ ಬಿ.ನಾಗೇಂದ್ರ ಅವರು, ಏಮ್ಸ್ ಮಾದರಿಯಲ್ಲೇ ಬಳ್ಳಾರಿ ಟ್ರಾಮಾಕೇರ್ ಸೆಂಟರನ್ನು ಅಪ್​ಗ್ರೇಡ್ ಮಾಡಬೇಕು ಹಾಗೂ ಇಂತಹ ಅತ್ಯಾಧುನಿಕ ಟ್ರಾಮಾಕೇರ್ ಸೆಂಟರ್ ನಿರ್ಮಿಸಿಕೊಟ್ಟಿದ್ದಕ್ಕೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್​ನ ಸದಸ್ಯ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಬುಡಾ ಅಧ್ಯಕ್ಷ ದಮ್ಮೂರು ಶೇಖರ, ಡಿಸಿ ನಕುಲ್, ಸಿಇಒ ಕೆ.ಆರ್.ನಂದಿನಿ, ಎಡಿಸಿ ಮಂಜುನಾಥ, ಎಸ್ಪಿ ಸಿ.ಕೆ.ಬಾಬಾ, ಎಸಿ ರಮೇಶ ಕೋನರೆಡ್ಡಿ, ವಿಮ್ಸ್ ಡೈರೆಕ್ಟರ್ ಡಾ.ಬಿ.ದೇವಾನಂದ, ವಿಮ್ಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಮರಿರಾಜ ಇದ್ದರು.

ABOUT THE AUTHOR

...view details