ಕರ್ನಾಟಕ

karnataka

By

Published : Mar 22, 2021, 12:57 PM IST

ETV Bharat / state

ವಕೀಲನ ಕೊಲೆ ಪ್ರಕರಣ 17 ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ: ಎಸ್ಪಿ ಸೈದುಲು ಅಡಾವತ್

ವಕೀಲನ ಕೊಲೆ ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.‌ ಅತೀ ಶೀಘ್ರದಲ್ಲಿ ಜಡ್ಜ್ ಮೆಂಟ್ ಬರಲಿದೆ ಎಂದು ಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

SP Saidulu Adawat
ಎಸ್ಪಿ ಸೈದುಲು ಅಡಾವತ್

ಹೊಸಪೇಟೆ:ಫೆ.27 ರಂದು ಕೋರ್ಟ್ ಆವರಣದಲ್ಲಿ ತಾರಿಹಳ್ಳಿ ವೆಂಕಟೇಶ ಅವರ ಕೊಲೆಯಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ದಿನಗಳ ಒಳಗೆ ಚಾರ್ಜ್ ಶೀಟ್(ದೋಷಾರೋಪ ಪಟ್ಟಿ) ಮಾಡಲಾಗಿದೆ ಎಂದು ಜಿಲ್ಲಾ‌‌ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿದರು.

ಎಸ್ಪಿ ಸೈದುಲು ಅಡಾವತ್

ನಗರದಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೋರ್ಟ್ ಹಾಗೂ ಜನರಲ್ಲಿ ಭಯ ಹೋಗಲಿ ಎನ್ನುವ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳು‌‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣ ಠಾಣೆಯ ಪೊಲೀಸ್ ಪಿಐ ಶ್ರೀನಿವಾಸ್​ ತಂಡ ಚಾರ್ಜ್ ಶೀಟ್ ಸಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ರಾಜ್ಯದಲ್ಲಿ ಇಷ್ಟು ಬೇಗ ಜಾರ್ಜ್ ಶೀಟ್ ಮಾಡಿರುವುದು ತುಂಬಾ ಕಡಿಮೆ ಎಂದು ಹೇಳಿದರು.

ಈ ಪ್ರಕರಣ ಈಗಾಗಲೇ ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ.‌ ಅತೀ ಶೀಘ್ರದಲ್ಲಿ ಜಡ್ಜ್ ಮೆಂಟ್ ಬರಲಿದೆ. ಯಾಕೆಂದರೆ ಬೇರೆ ಅವರು ಅಪರಾಧ ಕೃತ್ಯದಲ್ಲಿ ತೊಡಗಿಕೊಳ್ಳಬಾರದು ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.

ABOUT THE AUTHOR

...view details