ಬಳ್ಳಾರಿ:ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾದ ಈ ಉಪಚುನಾವಣೆಯನ್ನು ಆಯೋಗ್ಯ (ಅನರ್ಹ) ಶಾಸಕರು ವಾಮಮಾರ್ಗದಿಂದ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಅಯೋಗ್ಯರು ವಾಮಮಾರ್ಗದಿಂದ ಈ ಉಪಚುನಾವಣೆ ಎದುರಿಸುತ್ತಿದ್ದಾರೆ.. ರಾಯರೆಡ್ಡಿ ವಾಗ್ದಾಳಿ - By election 2019
ಉಪಚುನಾವಣೆ ಸಮೀಪುಸುತ್ತಿದೆ. ವಿಜಯನಗರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮಗನ ಮದುವೆ ನೆಪ ಹೇಳಿ ವಾಮಮಾರ್ಗದಲ್ಲಿ ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.
![ಅಯೋಗ್ಯರು ವಾಮಮಾರ್ಗದಿಂದ ಈ ಉಪಚುನಾವಣೆ ಎದುರಿಸುತ್ತಿದ್ದಾರೆ.. ರಾಯರೆಡ್ಡಿ ವಾಗ್ದಾಳಿ Basavaraj Rayareddy](https://etvbharatimages.akamaized.net/etvbharat/prod-images/768-512-5192920-thumbnail-3x2-vicky.jpg)
ಆನಂದ್ ಸಿಂಗ್ ಮೇಲೆ ಬಸವರಾಜ ರಾಯರೆಡ್ಡಿ ಆರೋಪ
ಮಾಜಿ ಸಚಿವ ಬಸವರಾಜ ರಾಯರೆಡ್ಡಿ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಡಿಸೆಂಬರ್ 1ರಂದು ಅವರ ಪುತ್ರನ ವಿವಾಹವನ್ನ ಅದ್ಧೂರಿಯಾಗಿ ಮಾಡಲು ಹೊರಟಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ತಿಳಿಸಿದರು.
ಅವರ ಪುತ್ರನ ವಿವಾಹದ ನೆಪದಲ್ಲಿ ಸರಿಸುಮಾರು ಎರಡು ಕೋಟಿ ರೂ.ಗಳ ಹಣವನ್ನ ಭೋಜನ ಕೂಟಕ್ಕೆ ಖರ್ಚು ಮಾಡುತ್ತಿದ್ದಾರೆ. 2.6 ಮತದಾರರಿಗೆ ಅಂದಾಜು 8 ಗ್ರಾಂನ 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.