ಕರ್ನಾಟಕ

karnataka

ETV Bharat / state

ಮನದಾಸೆ ನಾಲಿಗೆ ಮೇಲೆ ನಲಿಯುತಿದೆ.. ವಿಜಯನಗರ ಜಿಲ್ಲೆ ಎಂದು ಹೇಳಿ ಕ್ಷಮೆ ಕೇಳಿದ ಆನಂದಸಿಂಗ್ - ವಿಜಯನಗರ ವಿಧಾನಸಭೆ ಉಪಚುನಾವಣೆ

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಹದಿನಾಲ್ಕು ತಿಂಗಳು ವನವಾಸಕ್ಕೆ ಹೋದ ಅನುಭವವಾಯಿತು ಅಂತಾ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್ ಹೇಳಿದ್ದಾರೆ.

ಆನಂದ್ ಸಿಂಗ್

By

Published : Nov 25, 2019, 4:18 PM IST

ಬಳ್ಳಾರಿ:ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ವಿಜಯನಗರ ಜಿಲ್ಲೆ ಎಂದು ಹೇಳಿ ತಕ್ಷಣ ಕ್ಷಮೆಯಾಚಿಸಿದ ಪ್ರಸಂಗ ಜಿಲ್ಲೆಯ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಕಮಲಾಪುರದಲ್ಲಿ ನಡೆದಿದೆ.

ಬಿಜೆಪಿ ಅಭ್ಯರ್ಥಿಆನಂದ್ ಸಿಂಗ್..

ಉಪಚುನಾವಣೆ ಪ್ರಚಾರದ ವೇಳೆ ಬಿ ಎಸ್‌ ಯಡಿಯೂರಪ್ಪನವರು ವೇದಿಕೆ ಮೇಲಿದ್ದಾಗ ಈ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಬಿಎಸ್​ವೈ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆಂದರು. ಬಿಎಸ್​ವೈಗೆ ಇರುಸುಮುರುಸು ಆಗಬಾರದೆಂದು ತಕ್ಷಣ ಕ್ಷಮೆ ಕೇಳಿ ಈ ವಿಜಯನಗರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.

ಹದಿನಾಲ್ಕು ತಿಂಗಳ ವನವಾಸ ನನ್ನದು:ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ 14 ತಿಂಗಳು ವನವಾಸಕ್ಕೆ ಹೋದ ಅನುಭವವಾಯಿತು. ಮೈತ್ರಿ ಸರ್ಕಾರದಲ್ಲಿ ಆರು ಕೋಟಿ ಜನರ ಜೀವನದ ಜೊತೆಗೆ ಚೆಲ್ಲಾಟ ನಡೆಸಿದ್ರು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಾಗಲಿ, ಕಾಂಗ್ರೆಸ್ ಮುಖಂಡರಿಗಾಗಲಿ ಜನರ ನಾಡಿಮಿಡಿತ ಗೊತ್ತಾಗಲಿಲ್ಲ.‌ ಈ ಕಾರಣಕ್ಕಾಗಿ ನಾನು ಹದಿನಾಲ್ಕು ತಿಂಗಳು ವನವಾಸ ಅನುಭವಿಸಿದೆ ಎಂದರು.

ಆ ಹದಿನಾಲ್ಕು ತಿಂಗಳು ಇಡೀ ರಾಜ್ಯಕ್ಕೆ ಗ್ರಹಣ ಬಡಿದಿತ್ತು. ಅಭಿವೃದ್ಧಿ ಶೂನ್ಯ ಸಾಧನೆಯಾಗಿತ್ತು. ಅಂತಹ ಪಕ್ಷಕ್ಕೆ ಸೇರ್ಪಡೆ ಆಗಿದ್ದ ನನಗೆ ಒಂದು ರೀತಿಯ ಇರುಸುಮುರುಸು ಉಂಟಾಯಿತು. ಬಿಜೆಪಿ ತೊರೆಯಲಿಕ್ಕೆ ಕೆಲ ತಾಂತ್ರಿಕ ಕಾರಣ ಇದ್ದವು. ಹಾಗಾಗಿ ಪಕ್ಷ ತೊರೆದಿದ್ದೇ ಎಂದಿದ್ದಾರೆ.

ABOUT THE AUTHOR

...view details