ಕರ್ನಾಟಕ

karnataka

ETV Bharat / state

ಬೈಕ್ ಜಾಥಾ ನಡೆಸಿ ಆನಂದ್​ ಸಿಂಗ್​ ಬೆಂಬಲಿಸಿದ ಬಿಜೆಪಿ ಕಾರ್ಯಕರ್ತರು - ಆನಂದ್​​ಸಿಂಗ್ ಅಭಿಮಾನಿಗಳಿಂದ ಹೊಸಪೇಟೆಯಲ್ಲಿ ಬೈಕ್​​ ರ್ಯಾಲಿ

ಬಿಜೆಪಿ ಕಾರ್ಯಕರ್ತರು ಆನಂದ್​​ಸಿಂಗ್​​ ಪರವಾಗಿ ಹೊಸಪೇಟೆಯಲ್ಲಿ ಬೈಕ್​ ಜಾಥಾ ನಡೆಸಿ ಪಕ್ಷಕ್ಕೆ ತಮ್ಮ ಬೆಂಬಲವನ್ನು‌ ಸೂಚಿಸಿದರು.

bjp
ಆನಂದ್​​ಸಿಂಗ್​ ಅಭಿಮಾನಿಗಳಿಂದ ಬಿಜೆಪಿಗೆ ಬೆಂಬಲ

By

Published : Nov 30, 2019, 8:46 PM IST

ಹೊಸಪೇಟೆ/ಬಳ್ಳಾರಿ:ನಗರದಲ್ಲಿ ಇಂದು ಸಂಜೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಆನಂದ್​​​ಸಿಂಗ್ ಪರವಾಗಿ ಮತ ಪ್ರಚಾರ ಮಾಡಲು ಬೈಕ್​ ಜಾಥಾ ನಡೆಸಿದರು.

ಸುಮಾರು ಎರಡು‌ ಸಾವಿರ ಬೈಕ್​​​ಗಳೊಂದಿಗೆ ಬಿಜೆಪಿ ಕಾರ್ಯಕರ್ತರುರಾಲಿಯಲ್ಲಿ ಭಾಗವಹಿಸಿ ಆನಂದ್​​ಸಿಂಗ್​ಗೆ ಬೆಂಬಲ ಸೂಚಿಸಿದ್ರು. ಆನಂದ್ ಸಿಂಗ್​ ​​​ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆಯನ್ನು ನೀಡಿದ್ದಾರೆ. ಅವರನ್ನು ಮೂರು ಬಾರಿ ಅಲ್ಲ, ಇನ್ನೂ ಮೂರು ಬಾರಿ ಗೆಲ್ಲಿಸುತ್ತೇವೆ. ಆನಂದ ಸಿಂಗ್ ಎಂದರೆ ಹೊಸಪೇಟೆ ಹೊಸಪೇಟೆ ಎಂದರೆ ಆನಂದ ಎಂದು ಅಭಿಮಾನಿಗಳು ಪ್ರಚಾರ ಮಾಡಿದರು.

ಆನಂದ್​​ಸಿಂಗ್​ ಅಭಿಮಾನಿಗಳಿಂದ ಬಿಜೆಪಿಗೆ ಬೆಂಬಲ

ಆ್ಯಂಬುಲೆನ್ಸ್​​ಗೆ ದಾರಿ ಬಿಟ್ಟ ಬೈಕ್ ಸವಾರರು:

ಹೊಸಪೇಟೆಯಲ್ಲಿ ಬಿಜೆಪಿ ‌ಬೈಕ್​ ಜಾಥಾದ ವೇಳೆ ಆ್ಯಂಬುಲೆನ್ಸ್ ಆಗಮಿಸಿದ್ದು, ​ಆ್ಯಂಬುಲೆನ್ಸ್ಗೆ ದಾರಿ ಬಿಟ್ಟು ಕಾರ್ಯಕರ್ತರು ಮಾನವೀಯತೆ ಮೆರದರು.

For All Latest Updates

ABOUT THE AUTHOR

...view details