ಕರ್ನಾಟಕ

karnataka

ETV Bharat / state

ಬೈಕ್​​-ಟ್ರ್ಯಾಕ್ಟರ್​​​​ ನಡುವೆ ಡಿಕ್ಕಿ... ಪ್ರಾಣಾಪಾಯದಿಂದ ಪಾರಾದ ತಂದೆ-ಮಗ

ಬಳ್ಳಾರಿಯಿಂದ ಕುರುಗೋಡು ಕಡೆ ಬೈಕ್ ಮೂಲಕ ಊರಿಗೆ ಪ್ರಯಾಣ ಮಾಡುತ್ತಿದ್ದ ಅಸುಂಡಿ ಗ್ರಾಮದ ಸೋಮನಾಥ ಗೌಡ (32) ಮತ್ತು ಆತನ ಮಗು ಕೊಟ್ರೇಶ್(4) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

By

Published : May 20, 2019, 7:17 AM IST

ಬೈಕ್-ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ

ಬಳ್ಳಾರಿ:ನಗರದ ಹೊರವಲಯದ ಮಾರುತಿನಗರ ಕ್ಯಾಂಪ್ ಮತ್ತು ಯರ್ರಿಂಗಳಿ ಗ್ರಾಮದ ನಡುವೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ನಿನ್ನೆ ರಾತ್ರಿ ಬಳ್ಳಾರಿಯಿಂದ ಕುರುಗೋಡು ಕಡೆ ಬೈಕ್ ಮೂಲಕ ಊರಿಗೆ ಪ್ರಯಾಣ ಮಾಡುತ್ತಿದ್ದ ಅಸುಂಡಿ ಗ್ರಾಮದ ಸೋಮನಾಥ ಗೌಡ (32) ಮತ್ತು ಆತನ ಮಗು ಕೊಟ್ರೇಶ್(4) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಡಿದು ಬೈಕ್ ಚಾಲನೆ ಮಾಡುತ್ತಿದ್ದುದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ತಂದೆ ಮತ್ತು ಮಗ ವಿಮ್ಸ್​ನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details