ಕರ್ನಾಟಕ

karnataka

By

Published : Dec 15, 2019, 8:05 PM IST

ETV Bharat / state

ಅಪಘಾತದಲ್ಲಿ ಮಗು ಸಾವು: ರೊಚ್ಚಿಗೆದ್ದ ಸಾರ್ವಜನಿಕರಿಂದ ಟ್ರ್ಯಾಕ್ಟರ್​ಗೆ ಬೆಂಕಿ..

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರೊಂದು​ ಮುಂದೆ ಚಲಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು, ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

Bike, Tractor Accident :  A Children Death
ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ: ಆರುವರ್ಷದ ಮಗು ಸಾವು. ಪೊಲೀಸರ ಮೇಲೆ ಹಲ್ಲೆ!

ಬಳ್ಳಾರಿ:ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರೊಂದು​ ಮುಂದೆ ಚಲಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು, ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ: ಆರು ವರ್ಷದ ಮಗು ಸಾವು. ಪೊಲೀಸರ ಮೇಲೆಯೂ ಹಲ್ಲೆ!

ನಿರಂಜನ (6) ಮೃತ ಬಾಲಕ. ಬಾಲಕನ ಪೋಷಕರಾದಹಡಗಲಿ ಪಟ್ಟಣದ ನಿವಾಸಿ ಅರವಿಂದ, ಪತ್ನಿ ಶ್ವೇತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೂವಿನಹಡಗಲಿ ಮೈಲಾರ ಶುಗರ್ಸ್ ಕಂಪನಿಗೆ ಕಬ್ಬನ್ನು ಕೊಂಡೊಯ್ಯುತ್ತಿದ್ದ ಟ್ರಾಕ್ಟರ್​ ಬೈಕ್​ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ರೊಚ್ಚಿಗೆದ್ದು ಕಬ್ಬು ದಾಸ್ತಾನಿನ ಟ್ರ್ಯಾಕ್ಟರ್​ಗೆ ಬೆಂಕಿ ಹಾಕಿ ಸುಟ್ಟಿದ್ದಾರೆ. ಆ ಬೆಂಕಿಯನ್ನು ನಂದಿಸಲು ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೂ ಅನುವು ಮಾಡಿ ಕೊಡದೇ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದುಸ್ಥಳಕ್ಕಾಗಮಿಸಿದ ಹೂವಿನಹಡಗಲಿ ಪೊಲೀಸರಿಗೂ, ಸಾರ್ವಜನಿಕರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಅದು ವಿಕೋಪಕ್ಕೆ ತಿರುಗಿ ಗಲಾಟೆ ಏರ್ಪಟ್ಟಿತು.‌ ಈ ವೇಳೆ ಹೂವಿನ ಹಡಗಲಿ ಪಿಎಸ್ಐ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ABOUT THE AUTHOR

...view details