ಕರ್ನಾಟಕ

karnataka

ETV Bharat / state

ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಗರ್ಭೀಣಿಯರ ವಿರೋಧ: ಮೌಢ್ಯಾಚರಣೆ ಸರಿಸಿ ಜಾಗೃತಿ ಮೂಡಿಸಿದ ಸಿಇಒ - Awareness Campaign by Toilet Construction

ಬಳ್ಳಾರಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಾ ಗ್ರಾಮಗಳಲ್ಲಿನ ಶೌಚಾಲಯ, ಬಚ್ಚಲು ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುವ ಗರ್ಭೀಣಿಯರ ಮನೆಗಳಿಗೆ ಜಿಲ್ಲಾ ಪಂಚಾಯಿತಿ ಕಾರ್ಯವ್ಯಾಪ್ತಿಗೆ ಬರುವ ತಾ. ಪಂ. ಇಒ, ಪಿಡಿಒ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಬಹುಮುಖ್ಯವಾಗಿ ಗರ್ಭೀಣಿಯರಿಗೆ ಹಾಗೂ ಆಕೆಯ ತಾಯಿಯಂದಿರಿಗೆ ಅರಿವು ಮೂಡಿಸುವ ಮೂಲಕ ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಮುಂದಾಗಿರೋದು ಶ್ಲಾಘನಾರ್ಹ.

Bellary Zilla panchayath CEO awareness on toilet construction
ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಗರ್ಭೀಣಿಯರ ವಿರೋಧ: ಮೌಢ್ಯಾಚರಣೆ ಸರಿಸಿ ಜಾಗೃತಿ ಮೂಡಿಸಿದ ಸಿಇಒ

By

Published : Dec 24, 2020, 2:38 PM IST

ಬಳ್ಳಾರಿ: ಮೌಢ್ಯಾಚರಣೆ, ಕಂದಾಚಾರದಂತಹ ಅನಿಷ್ಠ ಪದ್ಧತಿಗೆ ಒಳಗಾಗಿರುವ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿನ ಗರ್ಭೀಣಿಯರ ಮನೆಗಳಲ್ಲಿ ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಭಾರಿ ವಿರೋಧವಿದೆ. ಆದರೆ, ಅದನ್ನು ಸೂಕ್ಷ್ಮವಾಗಿ ಗಮನಿಸಿದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಕೆ. ಆರ್. ನಂದಿನಿ ಅವರು ಈ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸದ್ದಿಲ್ಲದೇ ಚಾಲನೆ ನೀಡಿದ್ದಾರೆ.

ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಗರ್ಭೀಣಿಯರ ವಿರೋಧ: ಮೌಢ್ಯಾಚರಣೆ ಸರಿಸಿ ಜಾಗೃತಿ ಮೂಡಿಸಿದ ಸಿಇಒ

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಾ ಗ್ರಾಮಗಳಲ್ಲಿನ ಶೌಚಾಲಯ, ಬಚ್ಚಲು ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುವ ಗರ್ಭೀಣಿಯರ ಮನೆಗಳಿಗೆ ಜಿಲ್ಲಾ ಪಂಚಾಯಿತಿ ಕಾರ್ಯವ್ಯಾಪ್ತಿಗೆ ಬರುವ ತಾ. ಪಂ. ಇಒ, ಪಿಡಿಒ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಬಹುಮುಖ್ಯವಾಗಿ ಗರ್ಭೀಣಿಯರಿಗೆ ಹಾಗೂ ಆಕೆಯ ತಾಯಿಯಂದಿರಿಗೆ ಅರಿವು ಮೂಡಿಸುವ ಮೂಲಕ ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಮುಂದಾಗಿರೋದು ಶ್ಲಾಘನಾರ್ಹ.

ಗರ್ಭೀಣಿಯರ ಸಾವಿಗೂ ಕಾರಣವಾಗಿದೆ ಈ ಮೌಢ್ಯಾಚರಣೆ: ಅನೇಕ ಮಹಿಳೆಯರು ಈ ಮೌಢ್ಯಾಚರಣೆಯಿಂದಾಗಿ ಪರೋಕ್ಷವಾಗಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಶೌಚಾಲಯ, ಬಚ್ಚಲು ಇಲ್ಲದ ಹಿನ್ನೆಲೆ ಹೊರಗಡೆ ಬಹಿರ್ದೆಸೆಗೆ ಹೋಗಿದ್ದಾಗ ಆರೋಗ್ಯದಲ್ಲಿ ಏರು ಪೇರಾಗಿ ಸಾವು - ನೋವು ಸಂಭವಿಸಿರುವ ಪ್ರಕರಣಗಳೂ ನಡೆದಿವೆ.

ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಕೆ. ಆರ್. ನಂದಿನಿ ಅವರು, ತಮ್ಮ ಇತರ ಸಿಬ್ಬಂದಿಯೊಂದಿಗೆ ಶೌಚಾಲಯ, ಬಚ್ಚಲು ನಿರ್ಮಾಣ ಅಭಿಯಾನಕ್ಕೆ ಕೈ ಹಾಕಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ABOUT THE AUTHOR

...view details