ಕರ್ನಾಟಕ

karnataka

By

Published : Aug 20, 2019, 11:41 AM IST

ETV Bharat / state

ಬಳ್ಳಾರಿ: ಹಾಸ್ಟೆಲ್​​ ಸೌಲಭ್ಯ ದೊರೆಯದವರಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್​​ಗಳಲ್ಲಿ ಅವಕಾಶ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ ನೀಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಸುರೇಶ್ ಬಾಬು ತಿಳಿಸಿದರು.

ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್ ಸುರೇಶ್ ಬಾಬು ಮಾಹಿತಿ ನೀಡಿದರು

ಬಳ್ಳಾರಿ:ಮೆಟ್ರಿಕ್ ಪೂರ್ವ ಮತ್ತುಮೆಟ್ರಿಕ್ ನಂತರದ ಹಾಸ್ಟೆಲ್​​ಗಳಲ್ಲಿ ಅವಕಾಶ ಸಿಗದವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ ನೀಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಸುರೇಶ್ ಬಾಬು ತಿಳಿಸಿದರು.

ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ 2019-20ನೇ ಸಾಲಿನಲ್ಲಿ 2587 ವಿದ್ಯಾರ್ಥಿಗಳು ಮರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 3013 ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ 11,470 ವಿದ್ಯಾರ್ಥಿಗಳು ಈ ಹಾಸ್ಟೆಲ್​​ಗಳಿಗೆ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ 8457 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆತಿಲ್ಲ. ಹಾಸ್ಟೆಲ್ ಬದಲಾಗಿ ಸರ್ಕಾರದ ಕಡೆಯಿಂದ ತಿಂಗಳಿಗೆ ಒಬ್ಬ ವಿದ್ಯಾರ್ಥಿಗೆ 1500 ರೂಪಾಯಿಯಂತೆ 10 ತಿಂಗಳವರೆಗೆ ವಿದ್ಯಾಸಿರಿ ಯೋಜನೆಯಲ್ಲಿ ಹಣ ನೀಡಲಾಗಿದೆ. 2018-19ನೇ ಸಾಲಿನಲ್ಲಿ ಮೆಟ್ರಿಕ್ ನಂತರದಲ್ಲಿ 3,880 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ 3 ಕೋಟಿ 98 ಲಕ್ಷ 98 ಸಾವಿರ ಪಾವತಿ ಮಾಡಲಾಗಿದೆ ಎಂದರು.

ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್.ಸುರೇಶ್ ಬಾಬು

ಜಿಲ್ಲೆಯಲ್ಲಿ 59 ಮೆಟ್ರಿಕ್ ಪೂರ್ವ ಮತ್ತು 56 ಮೆಟ್ರಿಕ್ ನಂತರದ ಹಾಸ್ಟೆಲ್​ಗಳಿವೆ. ಮೆಟ್ರಿಕ್ ಪೂರ್ವ ಹಾಸ್ಟೆಲ್​​ನಲ್ಲಿ 3930 ವಿದ್ಯಾರ್ಥಿಗಳು, ಮೆಟ್ರಿಕ್ ನಂತರದಲ್ಲಿನ ಹಾಸ್ಟೆಲ್​​ನಲ್ಲಿ 5775 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಸತಿ ನಿಲಯಗಳ ಖರ್ಚು ವೆಚ್ಚ ಹೇಗೆ :

115 ವಸತಿ ನಿಲಯಗಳಲ್ಲಿ 50 ಸ್ವಂತ ಕಟ್ಟಡಗಳು, 3 ಉಚಿತ ಕಟ್ಟಡಗಳಿವೆ. 62 ವಸತಿ ನಿಲಯದ ಕಟ್ಟಡಗಳು ಬಾಡಿಗೆಯಲ್ಲಿ ನಡೆಯುತ್ತಿದೆ. ಅದರ ತಿಂಗಳ ವೆಚ್ಚ 9 ಲಕ್ಷ 7 ಸಾವಿರ 860 ರೂಪಾಯಿ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ 56 ವಸತಿ ನಿಲಯಗಳಿಗಾಗಿ ಸರ್ಕಾರ ಸ್ಥಳೀಯ ಸಂಸ್ಥೆ ಹಾಗೂ ಸ್ಥಾಯಿ ಸಮಿತಿಗಳಿಂದ ಜಮೀನನನ್ನು ಪಡೆದುಕೊಂಡಿದೆ. ಇದರಲ್ಲಿ 10 ವಸತಿ ನಿಲಯಗಳಿಗೆ ವಿವಿಧ ಯೋಜನೆಗಳಾದ ಎಸ್.ಡಿ.ಪಿ ( ಸ್ಪೇಷನ್ ಡೆವಲಪ್ಮೆಂಟ್ ಪ್ಲಾನ್) ಸಂಡೂರು, ಸಿರುಗುಪ್ಪ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡ್​ನಿಂದ ಹೊಸಪೇಟೆ, ತಂಬ್ರಹಳ್ಳಿ ವಸತಿ ನಿಲಯ ಕಟ್ಟಡ ಆರಂಭವಾಗಿದೆ ಎಂದರು.

ಕ್ರೈಸ್ಟ್​​ನಿಂದ ನಾಲ್ಕು ವಸತಿ ನಿಲಯ ಇಲಾಖೆಯ ವಶಕ್ಕೆ:

ಬಳ್ಳಾರಿ ಜಿಲ್ಲೆಯಲ್ಲಿ ಕ್ರೈಸ್ಟ್ ಅಧಿನದಲ್ಲಿದ್ದ ತಂಬ್ರಹಳಿ ಪಟ್ಟಣ, ತೆಲುಗುಹಳ್ಳಿ, ಬೂದನೂರ್, ಹೊಸಪೇಟೆ ಆರ್.ಟಿ.ಒ ಕಚೇರಿ ಹಿಂಭಾಗ ಸೇರಿ ಒಟ್ಟು ನಾಲ್ಕು ವಸತಿ ನಿಲಯಗಳನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಮುಂದಿನ ಯೋಜನೆಗಳು ಏನು ?

ಸ್ವಂತ ಕಟ್ಟಡಗಳು ಇದ್ದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡಬಹುದು. ಕೆ.ಎಂ.ಇ.ಆರ್.ಸಿಯಿಂದ ವರ್ಷಕ್ಕೆ 300 ಕೋಟಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಅದು ಜಾರಿಯಾದರೆ ಶೈಕ್ಷಣಿಕವಾಗಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆಯಾಗಿ ಸ್ಮಾರ್ಟ್​ ಕ್ಲಾಸ್ ಮತ್ತು ಮಲ್ಟಿ ಪರ್ಪಸ್ ಕಟ್ಟಡದಲ್ಲಿ ಕಂಪ್ಯೂಟರ್ ಲ್ಯಾಬ್, ಇ- ಲೈಬ್ರರಿ ಮತ್ತು ವಿದ್ಯಾರ್ಥಿಗಳಿಗೆ ಸಮಾಲೋಚನೆ ಮಾಡುವ ಅವಕಾಶ ಸಿಗಬಹುದು ಎಂದು ತಿಳಿಸಿದರು‌.

ABOUT THE AUTHOR

...view details